SHIVAMOGGA LIVE NEWS | 10 MAY 2023
BHADRAVATHI : ಮೂಲ ಸೌಕರ್ಯಕ್ಕೆ ಆಗ್ರಹಿಸಿ ಕನಸಿನಕಟ್ಟೆ ಗ್ರಾಮಸ್ಥರು ಮತದಾನ ಬಹಿಷ್ಕಾರಿಸಿದ್ದಾರೆ (Boycott). ಗ್ರಾಮದಲ್ಲಿ ಸ್ಥಾಪಿಸಿರುವ ಬೂತ್ನಲ್ಲಿ ಬೆಳಗ್ಗೆಯಿಂದ ಇಬ್ಬರು ಮಾತ್ರ ಮತದಾನ ಮಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಭದ್ರಾವತಿ ತಾಲೂಕಿನ ಕನಸಿಕಟ್ಟೆ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ರಾಜಕೀಯ ನಾಯಕರು ಊರೊಳಗೆ ಪ್ರವೇಶಿಸಬಾರದು ಎಂದು ಬ್ಯಾನರ್ ಹಾಕಿದ್ದರು. ಹೀಗಿದ್ದೂ ಗ್ರಾಮಸ್ಥರ ಮನವೊಲಿಸಲು ಯಾರೊಬ್ಬರು ಬಂದಿಲ್ಲ.
ಎರಡು ಮತ ಮಾತ್ರ ಚಲಾವಣೆ
ಕನಸಿನಕಟ್ಟೆ ಗ್ರಾಮದ ಬೂತ್ನಲ್ಲಿ 1021 ಮತಗಳಿವೆ. ಬೆಳಗ್ಗೆಯಿಂದ ಎರಡು ಮತಗಳು ಮಾತ್ರ ಚಲಾವಣೆಯಾಗಿದೆ. ಮತಗಟ್ಟೆಯಿಂದ ನೂರು ಮೀಟರ್ ಹೊರಗೆ ಮತದಾನ ಬಹಿಷ್ಕಾರದ (Boycott) ಬ್ಯಾನರ್ ಕಟ್ಟಿದ್ದಾರೆ. ಮತದಾರರು ನೂರು ಮೀಟರ್ ಹೊರಗೆ ನಿಂತು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಜನರ ಆಕ್ರೋಶಕ್ಕೆ ಕಾರಣವೇನು?
ಕನಸಿನಕಟ್ಟೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲ. ಇದರಿಂದ ಜನರು ಹೊರ ಜಗತ್ತಿನಿಂದ ದೂರಾಗಿದ್ದಾರೆ. ಇನ್ನು, ಊರಿಗೆ ಬಸ್ ಸೌಕರ್ಯವಿಲ್ಲ. ಊರಿನ ಮಕ್ಕಳು ಶಾಲೆ, ಕಾಲೇಜಿಗೆ ತೆರಳುವುದು ಕಷ್ಟವಾಗಿದೆ. ಊರಿನಲ್ಲಿ ಸ್ಮಶಾನವು ಇಲ್ಲ. ತಮ್ಮ ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ರಾಜಕಾರಣಿಗಳು ತಮ್ಮೂರಿಗೆ ಪ್ರವೇಶಿಸಬಾರದು ಎಂದು ಬ್ಯಾನರ್ ಕಟ್ಟಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200