ಶಿವಮೊಗ್ಗ ಲೈವ್.ಕಾಂ | RIPPONPETE | 05 ಡಿಸೆಂಬರ್ 2019
ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್’ಗೆ ಬೈಕ್ ಹ್ಯಾಂಡಲ್ ತಗುಲಿ, ಕೆಳಗೆ ಬಿದ್ದ ಸವಾರನ ತಲೆ ಮೇಲೆ ಲಾರಿ ಹರಿದಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಮ್ಮಚ್ಚಿ ಗ್ರಾಮದ ಮಂಜುನಾಥ ಆಚಾರ್ (50) ಮೃತರು. ರಿಪ್ಪನ್’ಪೇಟೆ ಸಮೀಪದ ಗರ್ತಿಕೆರೆ ಹೈಸ್ಕೂಲ್ ಮುಂಭಾಗ ಘಟನೆ ನಡೆದಿದೆ.
ಜವರಾಯನಾದ ಬ್ಯಾರಿಕೇಡ್
ಹೈಸ್ಕೂಲ್ ಮುಂಭಾಗದ ರಸ್ತೆಯಲ್ಲಿ ವಾಹನಗಳ ವೇಗ ತಗ್ಗಿಸಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಇದೇ ಬ್ಯಾರಿಕೇಡ್’ಗೆ ಬೈಕ್ ಹ್ಯಾಂಡಲ್ ತಗುಲಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹ್ಯಾಂಡಲ್ ತಗುಲುತ್ತಿದ್ದಂತೆ ಮಂಜುನಾಥ ಆಚಾರ್ ಅವರು ಕೆಳಗೆ ಬಿದ್ದಿದ್ದಾರೆ. ಪಕ್ಕದಲ್ಲಿ ಹೋಗುತ್ತಿದ್ದ ಲಾರಿ ಚಕ್ರ ಮಂಜುನಾಥ ಆಚಾರ್ ಅವರ ತಲೆ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಟೇಷನ್’ಗೆ ಹೋದ ಲಾರಿ
ಘಟನೆ ಸ್ಥಳದಲ್ಲಿ ಚಾಲಕ ಲಾರಿ ನಿಲ್ಲಿಸದೆ ಇದ್ದಿದ್ದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಲಾರಿ ಚಾಲಕ ಲಾರಿಯನ್ನು ರಿಪ್ಪನ್’ಪೇಟೆ ಠಾಣೆ ಕೊಂಡೊಯ್ದು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ರಿಪ್ಪನ್’ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Bike rider dies on the spot with an accident with a truck in Ripponpete of Hosanagara Taluk. Incident took place in Ripponpete Police Station limits.