Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » 3 ತಿಂಗಳಿಂದ ಸೇವೆ ಇಲ್ಲ, ತಪ್ಪಲಿಲ್ಲ ಶರಾವತಿ ಹಿನ್ನೀರು ಭಾಗದ ಜನರ ಅಲೆದಾಟ, ಇನ್ನಾದರೂ ಕಣ್ಣು ತೆರೆಯುತ್ತಾ ಆಡಳಿತ?

3 ತಿಂಗಳಿಂದ ಸೇವೆ ಇಲ್ಲ, ತಪ್ಪಲಿಲ್ಲ ಶರಾವತಿ ಹಿನ್ನೀರು ಭಾಗದ ಜನರ ಅಲೆದಾಟ, ಇನ್ನಾದರೂ ಕಣ್ಣು ತೆರೆಯುತ್ತಾ ಆಡಳಿತ?

17/08/2023 9:43 AM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 17 AUGUST 2023

BYKODU : ‘ಆಧಾರ ನೀನೆ ಎಂದು ಲೋಕ ನಂಬಿದೆʼ ಎಂಬ ಗೀತೆಯಂತೆ ಎಲ್ಲ ಸರ್ಕಾರಿ ಸೌಲಭ್ಯ ಪಡೆಯಲು ಸರ್ಕಾರ ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಿದೆ. ಆದರೆ ಆಧಾರ್ ಕಾರ್ಡ್‌ ನೀಡುವ ಜವಾಬ್ದಾರಿ ಹೊತ್ತ ನೋಂದಣಿ ಕೇಂದ್ರಗಳು (Registration Centre) ಮಾತ್ರ ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದೆ. ಹಾಗಾಗಿ ಶರಾವತಿ ಹಿನ್ನೀರು (Sharavati Backwater) ಭಾಗದ ಜನರು ಪರದಾಡುವಂತಾಗಿದೆ.

» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

Tumari Karuru Sullalli Nada Kacheri

ಕರೂರು ಹೋಬಳಿ ವ್ಯಾಪ್ತಿಯ ಸುಳ್ಳಳ್ಳಿ ಮತ್ತು ತುಮರಿಯಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ ಕೇಂದ್ರವಿದೆ. ಆದರೆ ಆಡಳಿತದ ನಿರ್ಲಕ್ಷ್ಯದಿಂದ ಇವುಗಳು ಕೆಟ್ಟು ನಿಂತಿದ್ದು, ಜನರನ್ನು ಸಂಕಷ್ಟಕ್ಕೆ ಒಡ್ಡಿವೆ. ಬಯೋಮೆಟ್ರಿಕ್ ಯಂತ್ರದ ಅವ್ಯವಸ್ಥೆಯಿಂದಾಗಿ ಮೂರು ತಿಂಗಳಿಂದ ಯಾವ ಕೆಲಸವು ಆಗದೆ ಕೇಂದ್ರಗಳು ಇದ್ದೂ ಉಪಯೋಗವಿಲ್ಲದಂತಾಗಿದೆ.

ನಿತ್ಯ ಅಲೆದಾಡುತ್ತಿರುವ ಹಿನ್ನೀರ ಜನ

ನಡುಗಡ್ಡೆಯ ದ್ವೀಪದ ಜನರು ಆಧಾರ್ ನೋಂದಣಿ, ತಿದ್ದುಪಡಿ, ದೂರವಾಣಿ ಸಂಖ್ಯೆ ಜೋಡಣೆ, ಇಕೆವೈಸಿ, ಗೃಹಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳ ನೋಂದಣಿಗಾಗಿ ಈ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದರೆ ಸೇವೆ ಸ್ಥಗಿತಗೊಂಡಿರುವುದರಿಂದ ದೂರದ ಸಾಗರ, ಕುಂದಾಪುರ, ಹೊಸನಗರ, ಭಟ್ಕಳಕ್ಕೆ ನಿತ್ಯ ಅಲೆಯುತ್ತಿದ್ದಾರೆ. ಅಲ್ಲಿಗೆ ಹೋದರೆ ಆಯಾ ದಿನವೆ ತಮ್ಮ ಸರದಿ ಸಿಗದೆ ಮರು ದಿನ ಪುನಃ ತೆರಳುವಂತಾಗಿದೆ. ವೃದ್ಧರು, ಶಾಲಾ ಮಕ್ಕಳು, ಮಹಿಳೆಯರು, ವಿಕಲಚೇತನರು ನಿತ್ಯ ಅಲೆದಾಡುತ್ತಿದ್ದಾರೆ. ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಸಾವಿರ ಜನರ ಸೇವೆಗೆ ಒಂದೂ ಆಧಾರ್ ನೋಂದಾಣಿ ಕೇಂದ್ರವಿಲ್ಲದಿರುವುದು ವಿಪರ್ಯಾಸ.

Sagara People Wait for Aadhar update

ಆಧಾರ್ ತಿದ್ದುಪಡಿ ಮತ್ತು ಇಕೆವೈಸಿ ಸೇರಿದಂತೆ ಅಗತ್ಯ ಸೇವೆಗಾಗಿ ನಾವು ನಿತ್ಯ ಸಾಗರಕ್ಕೆ 65 ಕಿಲೋಮೀಟರ್ ಅಲೆಯಬೇಕಾಗಿದೆ. ಹೋದ ದಿನ ನಮ್ಮ ಸರದಿ ಸಿಗದೆ ಪರದಾಡುವಂತಾಗಿದೆ. ಹೋಬಳಿ ಕೇಂದ್ರದಲ್ಲಿ ಈ ಸೇವೆ ಲಭ್ಯವಿದಿದ್ದರೆ ನಮಗೆ ಈ ಗೋಳು ತಪ್ಪುತ್ತಿತ್ತು.ಪದ್ಮರಾಜ್, ಕಟ್ಟಿನಕಾರು

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಳೆ ಮಾಯ, ಭತ್ತ ನಾಟಿಗೆ ನೀರಿಲ್ಲ, ಹೊಲದಲ್ಲೆ ಒಣಗಿದ ಮೆಕ್ಕೆಜೋಳ, ಈ ಮಧ್ಯೆ ರೈತರಿಗೀಗ ಹೊಸ ಸಂಕಷ್ಟ

ಡಿಜಿಟಲ್ ಸೇವೆ ಕಡ್ಡಾಯಗೊಳಿಸಿರುವ ಸರ್ಕಾರ ಅಗತ್ಯ ಸೌಲಭ್ಯ ಒದಗಿಸುತ್ತಿಲ್ಲ.  ಪ್ರತಿ ಸರ್ಕಾರಿ ಸವಲತ್ತು ಪಡೆಯಲು ಹಿನ್ನೀರಿನ ಜನರು ಪ್ರತಿಭಟನೆ, ಹೋರಾಟದ ಹಾದಿ ಹಿಡಿಯಬೇಕಾಗಿದೆ. ಸಾರಿಗೆ, ನೆಟ್‌ವರ್ಕ್‌ ಸೇವೆ,  ಪಡಿತರ, ಇಕೆವೈಸಿ ಸೇರಿದಂತೆ ಅಗತ್ಯ ಸೇವೆಗಾಗಿ ಪರದಾಡುವಂತಾಗಿದೆ.

Grama One Centre at Bhanukuli

ಆಧಾರ್ ನೋಂದಣಿ ತಿದ್ದುಪಡಿಯ ಬಯೋಮೆಟ್ರಿಕ್ ಯಂತ್ರ ಹಾಳಾಗಿದೆ. ತಿಂಗಳುಗಳಿಂದ ಸೇವೆ ಸ್ಥಗಿತಗೊಂಡಿದೆ. ಸರಿಪಡಿಸಲು ತಾಲೂಕು ಆಡಳಿತಕ್ಕೆ ಕಳುಕಿಸಲಾಗಿದೆ. ಜನರು ಸೇವೆಗಾಗಿ ಬರುತ್ತಿದ್ದಾರೆ. ನಾವು ಅಸಹಾಯಕರಾಗಿದ್ದೇವೆ. ಅಗತ್ಯ ಉಪಕರಣ ಬಂದ ನಂತರ ಪ್ರಾರಂಭಿಸಲಾಗುತ್ತದೆ.ನಾಡ ಕಚೇರಿ ಡೇಟಾ ಎಂಟ್ರಿ ಆಪರೇಟರ್‌

ಬ್ಯಾಟರಿ, ಎಲೆಕ್ಟ್ರಾನಿಕ್‌ ಉಪಕರಣಗಳಿಲ್ಲ

ಭೂ ದಾಖಲೆ ಸೇರಿದಂತೆ ಜನರಿಗೆ ಅಗತ್ಯ ಸೇವೆಯನ್ನು ಡಿಜಿಟಲ್‌ ರೂಪದಲ್ಲಿ ನೀಡಲು ಸರ್ಕಾರ ಹೋಬಳಿಗೆ ಒಂದು ನಾಡ ಕಛೇರಿ ತೆರೆದಿದೆ. ಆದರೆ ಕಚೇರಿಗೆ ಅಗತ್ಯವಿರುವ ಬ್ಯಾಟರಿ, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸರಿಯಾಗಿ ಪೂರೈಸಿಲ್ಲ. ಇನ್ನು, ಯೋಜನೆಗಳ ನೋಂದಣಿ ಕಮಿಷನ್ ಪಾವತಿಯಾಗದೆ ಗ್ರಾಮ ಒನ್ ಸಿಬ್ಬಂದಿ ಸಂಕಷ್ಟಕೀಡಾಗಿದ್ದಾರೆ. ಹೋಬಳಿಯಲ್ಲಿ ಎರಡು ಗ್ರಾಮ ಒನ್ ಕೇಂದ್ರಗಳಿದ್ದರೂ ಸರ್ವರ್ ಸಮಸ್ಯೆಯಿಂದ ಸೊರಗುತ್ತಿವೆ.

PARISHRAMA neet academy

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article Shivamogga Live Today News ಶಿವಮೊಗ್ಗ ಜಿಲ್ಲೆಯ ಇವತ್ತಿನ 10 ಪ್ರಮುಖ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ | 17 ಆಗಸ್ಟ್‌ 2023
Next Article ADIKE-RATE-SHIVAMOGGA-LIVE-NEWS ಅಡಿಕೆ ಧಾರಣೆ| 17 ಆಗಸ್ಟ್‌ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌?

ಇದನ್ನೂ ಓದಿ

-Linganamakki-Dam-General-Image
SAGARA

ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಒಂದು ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
09/07/2025
areca-growers-meet-Sagara-
SAGARA

ಅಡಿಕೆ ಬೆಳೆಗಾರರ ಸಂಘದಿಂದ ಉಪ ವಿಭಾಗಾಧಿಕಾರಿ ಭೇಟಿ, ಚರ್ಚೆ, ಏನೆಲ್ಲ ಮನವಿ ಸಲ್ಲಿಸಲಾಯ್ತು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
09/07/2025
Sigandur-Bridge-work-photo
SAGARA

ಸಿಗಂದೂರು ಸೇತುವೆ, ಸಾಗರದಿಂದ ಉಡುಪಿ, ಮಂಗಳೂರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
09/07/2025
Beluru-Gopalakrishna-in-a-press-meet
SAGARA

ಸಿಗಂದೂರು ಸೇತುವೆ, ‘ನಮ್ಮ ಭೇಟಿಯ ಬಳಿಕವೇ ಉದ್ಘಾಟನೆ ದಿನಾಂಕ ನಿಗದಿʼ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
07/07/2025
-Linganamakki-Dam-General-Image
SAGARA

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1.30 ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
06/07/2025
Kattinakaru-wild-pig-menace
SAGARA

ಕಟ್ಟಿಕನಾರು ಬಳಿ ಕಾಡು ಹಂದಿಗಳ ಹಾವಳಿ, ಅಡಿಕೆ ಸಸಿಗಳು ನಾಶ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
25/06/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?