ಬಿಹಾರದಿಂದ ಮನೆ ಬಿಟ್ಟು ಸಾಗರಕ್ಕೆ ಬಂದ ಯುವಕ, ಮತ್ತೆ ಪೋಷಕರನ್ನು ಸೇರಲು ನೆರವಾದ ಕರ್ಕಿಕೊಪ್ಪ ಆಟೋ ಚಾಲಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

125203640 1007170469762863 4215862945643792899 o.jpg? nc cat=109&ccb=2& nc sid=730e14& nc ohc=bJYhOzOjCHwAX f8PRZ& nc ht=scontent.fblr1 3

ಶಿವಮೊಗ್ಗ ಲೈವ್.ಕಾಂ |SAGARA / SHIMOGA NEWS | 21 NOVEMBER 2020

ಜಾರ್ಖಂಡ್ ರಾಜ್ಯದ ರಾಂಚಿಯಿಂದ ಮನೆ ಬಿಟ್ಟು ಬಂದು ಸಾಗರದ ಸುತ್ತಮುತ್ತ ಅಲೆದಾಡುತ್ತಿದ್ದ ಯುವಕ ಪುನಃ ಕುಟುಂಬ ಸೇರಿದ್ದಾನೆ. ಒಂದು ತಿಂಗಳ ಬಳಿಕ ಯುವಕ ಮನೆಯವರನ್ನು ಸೇರಲು ನೆರವಾದ ಸಾಗರದ ಆಟೋ ಚಾಲಕನಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಶಂಸೆ ಪತ್ರ ನೀಡಿದೆ.

ಬಿಹಾರದಿಂದ ಬಂದಿದ್ದ ಯುವಕ

ಶಾಶ್ವತ್ ಕುಮಾರ್ (24) ಎಂಬಾತ ಬಿಹಾರದಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದ. ಅಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ. ಹೇಗೋ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ತಲುಪಿದ್ದ. ಜೋಗ ಸುತ್ತಮುತ್ತ ಓಡಾಡಿಕೊಂಡಿದ್ದ. ಈತನ ಚಲನವಲನ ಗಮನಿಸಿದ ಆಟೋ ಚಾಲಕ ಕರ್ಕಿಕೊಪ್ಪದ ಶೇಖರ ಪೂಜಾರಿ, ಯುವಕನನ್ನು ವಿಚಾರಿಸಿದ್ದರು. ಆತ ಮನೆ ಬಿಟ್ಟು ಬಂದಿರುವುದು ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

125990631 823061118491321 7827619422849933530 n.jpg? nc cat=100&ccb=2& nc sid=8bfeb9& nc ohc=pXE6q5H7OssAX9cOPVj& nc ht=scontent.fblr1 5

ಜಾರ್ಖಂಡ್‍ನಿಂದ ಐಪಿಎಸ್‍ ಅಧಿಕಾರಿ ಫೋನ್

ಯುವಕ ಸಾಗರದಲ್ಲಿ ಓಡಾಡಿಕೊಂಡು ಇರುವ ಮಾಹಿತಿ ತಿಳಿದ ಜಾರ್ಖಂಡ್ ಐಜಿಪಿ, ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರು, ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜೋಗ ಠಾಣೆ ಪೊಲಿಸರು ಶಾಶ್ವತ್ ಕುಮರ್‍ನನ್ನ ಪತ್ತೆ ಮಾಡಿದ್ದಾರೆ.

ಶಿವಮೊಗ್ಗಕ್ಕೆ ಬಂದ ಪೋಷಕರು

ಶಾಶ್ವತ್ ಕುಮಾರ್‍ ಪತ್ತೆ ಆಗಿರುವ ಮಾಹಿತಿ ತಿಳಿದ ಪೋಷಕರು ಶಿವಮೊಗ್ಗಕ್ಕೆ ಬಂದಿದ್ದರು. ಪೊಲೀಸರು ಆತನನ್ನ ಪೋಷಕರಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನೆರವಾದ ಆಟೋ ಚಾಲಕ ಶೇಖರ್ ಪೂಜಾರಿಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಶೇಖರ್ ಪೂಜಾರಿ ಅವರಿಗೆ ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ನೀಡಿದ್ದಾರೆ.

125547783 823060901824676 5029826236192795797 o.jpg? nc cat=111&ccb=2& nc sid=8bfeb9& nc ohc=OjI2XMa cbkAX8PKIWB& nc ht=scontent.fblr1 5

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 21, 2020

Leave a Comment