ಸಾಗರದಲ್ಲಿ ಇವತ್ತು ಕೆರೆ ಹಬ್ಬ, ಶಾಸಕರ ನೇತೃತ್ವದಲ್ಲಿ ಗಣಪತಿ ಕೆರೆ ಸ್ವಚ್ಛತೆ

 ಶಿವಮೊಗ್ಗ  LIVE 

SHIVAMOGGA LIVE NEWS | 12 ಮಾರ್ಚ್ 2022

ಕೆರೆ ಹಬ್ಬದ ಅಂಗವಾಗಿ ಇವತ್ತು ಸಾಗರದ ಗಣಪತಿ ಕೆರೆಯ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಸ್ವಯಂ ಸೇವಕರು ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.

Sigandur-Janthre-2026-scaled.

Shimoga Nanjappa Hospital

ಗಣಪತಿ ಕೆರೆಯ ದಂಡೆಯನ್ನು ಜನರು ಸ್ವಚ್ಛಗೊಳಿಸಿದರು. ವಿವಿಧ ಸಂಘಟನೆಗಳು, ನಗರ ಸಭೆಯ ಪೌರ ಕಾರ್ಮಿಕರು, ಜನರು ಸ್ವಯಂ ಪ್ರೇರಿತವಾಗಿ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದರು.

ಕಸ ತೆಗೆದು ಮಾದರಿಯಾದ ಶಾಸಕ

ಸ್ವಯಂ ಸೇವಕರೊಂದಿಗೆ ಕೈ ಜೋಡಿಸಿದ ಶಾಸಕ ಹರತಾಳು ಹಾಲಪ್ಪ, ತಾವೆ ಕಸ ತೆಗೆದು ಉಳಿದವರಿಗೆ ಮಾದರಿಯಾದರು. ಈ ವೇಳೆ ಮಾತನಾಡಿದ ಶಾಸಕ  ಹರತಾಳು ಹಾಲಪ್ಪ ಅವರು, ‘ಎರಡು ವರ್ಷದಿಂದ ಕೆರೆ ಹಬ್ಬ ನಡೆಸುತ್ತಿದ್ದೇವೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದು, ಪ್ಲಾಸ್ಟಿಕ್ ಮುಕ್ತಗೊಳಿಸುವುದು ಕೆರೆ ಹಬ್ಬದ ಉದ್ದೇಶ. ಬೆಳಗ್ಗೆ ಕೆರೆ ಸ್ವಚ್ಛತೆ ಮಾಡುತ್ತೇವೆ. ಸಂಜೆ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಕಬಡಿ ಪಂದ್ಯಾವಳಿ ಇರಲಿದೆ’ ಎಂದರು.

Ganapathi Kere Cleaning

Ganapathi Kere Cleaning

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment