ಸಾಗರದಲ್ಲಿ ಮದ್ಯದಂಗಡಿ ಮುಂದೆ ನಾಗರಿಕರ ಪ್ರತಿಭಟನೆ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 

ಸಾಗರ : ಭೀಮನಕೋಣೆ ರಸ್ತೆಯಲ್ಲಿ ಹೊಸದಾಗಿ ಮದ್ಯದಂಗಡಿ (Shop) ತೆರೆಯಲು ಅವಕಾಶ ನೀಡಿದ್ದನ್ನು ಖಂಡಿಸಿ ವಿಜಯನಗರ ನಾಗರಿಕ ವೇದಿಕೆ ವತಿಯಿಂದ ಮದ್ಯದಂಗಡಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮದ್ಯದ ಅಂಗಡಿಯನ್ನು ಕೂಡಲೆ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಈ ಭಾಗದಲ್ಲಿ ವಿಜಯನಗರ, ರಾಮನಗರ ಸೇರಿದಂತೆ ಅನೇಕ ಬಡಾವಣೆಗಳಿವೆ. ಶಾಂತಿ, ಸುವ್ಯವಸ್ಥೆ ಕಾಡುವ ಹಿನ್ನೆಲೆ ಮದ್ಯದಂಗಡಿ (Shop) ತೆರೆಯಲು ಅವಕಾಶ ನೀಡಬಾರದು.

– ಕೆ.ಆರ್.ಗಣೇಶ್‌ ಪ್ರಸಾದ್‌, ನಗರಸಭೆ ಸದಸ್ಯ

sagara-vijayanagara-residents-protest-against-liquor-shop

ಇದನ್ನೂ ಓದಿ » ಗೋವಾ ನಂಬರ್‌ ಕಾರು ತಡೆದ ಅಧಿಕಾರಿಗಳು, ಸಿಕ್ತು ನಾನಾ ಬ್ರಾಂಡ್‌ನ ಮದ್ಯ, ಎಷ್ಟು ಲೀಟರ್‌ ಇತ್ತು?

ತೆರಿಗೆ ಸಂಗ್ರಹ ಉದ್ದೇಶಕ್ಕಾಗಿ ಸರ್ಕಾರ ಎಲ್ಲೆಂದರಲ್ಲಿ ಮದ್ಯದಂಗಡಿ ತೆರೆಯುವುದು ಸರಿಯಲ್ಲ. ಜನರ ನೆಮ್ಮದಿ ಕಸಿದುಕೊಂಡು ಸರ್ಕಾರ ಅಬಕಾರಿ ಇಲಾಖೆ ಮೂಲಕ ಹಣ ಸಂಗ್ರಹ ಮಾಡುವುದನ್ನು ನಾಗರಿಕರು ಖಂಡಿಸಬೇಕು. ಶಾಸಕರು ಕೂಡ ಇದೇ ಬಡಾವಣೆ ನಿವಾಸಿಯಾಗಿದ್ದು, ಅವರ ಗಮನಕ್ಕು ವಿಷಯ ತರಲಾಗಿದೆ.

– ರವಿ ಲಿಂಗನಮಕ್ಕಿ, ನಗರಸಭೆ ಸದಸ್ಯ

ಈ ರಸ್ತೆಯಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಇವರಿಗೆ ತೊಂದರೆ ಆಗಲಿದೆ. ಮದ್ಯ ಸೇವಿಸಿ ಇಲ್ಲಿಯೆ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ ಮೇಸ್ತ್ರಿ, ಅರವಿಂದ ರಾಯ್ಕರ್‌, ನಾರಾಯಣಮೂರ್ತಿ ಕಾನುಗೋಡು, ಶಶಿಕಾಂತ್‌ ಸೇರಿದಂತೆ ಹಲವರು ಇದ್ದರು.

NFC-Chicken-Kabab

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment