Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ

ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ

16/12/2021 11:47 AM
ನಿತಿನ್‌ ಕೈದೊಟ್ಲು

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021

 

» ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ

ಘಟನೆ 1 : ಹೆರಿಗೆ ನೋವಿನಿಂದ ಬಳಲಿಕೆ

ಸಂಜೆ 6 ಗಂಟೆಗೆ ಚದರವಳ್ಳಿ ಗ್ರಾಮದ ಚೈತ್ರಾ ಅವರಿಗೆ ಹೆರಿಗೆ ನೋವು ಶುರುವಾಯ್ತು. ಕುಟುಂಬದವರು 108 ಆಂಬುಲೆನ್ಸ್’ಗೆ ಕರೆ ಮಾಡಿದರು. ರಾತ್ರಿಯಾದರೂ ಆಂಬುಲೆನ್ಸ್ ಸುಳಿವಿಲ್ಲ. ಹೆರಿಗೆ ನೋವಿನಿಂದ ನರಳುತ್ತಿದ್ದ ಚೈತ್ರಾ ಅವರನ್ನು ಕಾರೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ರಾತ್ರಿ ಹೆರಿಗೆಯಾಯ್ತು. ಹೆಚ್ಚಿನ ಚಿಕಿತ್ಸೆಗೆ ನಡುರಾತ್ರಿ ಹೊತ್ತಿಗೆ ಸಾಗರದ ಆಸ್ಪತ್ರೆಗೆ ಕಳುಹಿಸಲಾಯಿತು. ಬೆಳಗಾಗುವುದರಲ್ಲಿ ಮಗು ಸಾವನ್ನಪ್ಪಿದೆ.

ADVT JULY NANJAPPA HOSPITAL HOME LAB TESTING

ಘಟನೆ 2 : ಅಪಘಾತದಲ್ಲಿ ತಲೆಗೆ ಗಾಯ

ತುಮರಿ ಸಮೀಪ ರಾತ್ರಿ ಬೈಕ್ ಸವಾರರಿಬ್ಬರು ದನವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಸವಾರರೊಬ್ಬರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗುತಿತ್ತು. ನೋವು ತಾಳಲಾರದೆ ಒದ್ದಾಡುತ್ತಿದ್ದರು. ಕೂಡಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಅದೆ ಹೊತ್ತಿಗೆ ಹೆರಿಗೆ ನಡೆಯುತಿತ್ತು.

ಇವರೆಡು ಬುಧವಾರ ರಾತ್ರಿ ತುಮರಿ ಭಾಗದಲ್ಲಿ ಒಂದೇ ಸಮಯಕ್ಕೆ ಸಂಭವಿಸಿದ ಮನ ಕಲಕುವ ಘಟನೆಗಳು. 108 ಆಂಬುಲೆನ್ಸ್ ಇದ್ದಿದ್ದರೆ ಚೈತ್ರಾ ಅವರ ಹೆಣ್ಣು ಮಗು ಅವರ ಮಡಿಲಲ್ಲಿರುತ್ತಿತ್ತು. ಕುಟುಂಬದವರು ಸಂತಸದಲ್ಲಿರುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರಿಗೆ ಕೂಡಲೆ ಪ್ರಾಥಮಿಕ ಚಿಕಿತ್ಸೆ ಲಭಿಸಿ, ನೋವು, ನರಳಾಟ ಕಡಿಮೆಯಾಗುತ್ತಿತ್ತು.

ಸಂಜೆಯಾಗುತ್ತಿದ್ದಂತೆ ಎಲ್ಲವೂ ಬದಲು

ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ತುಮರಿ, ಸಿಗಂದರೂ ಭಾಗದಲ್ಲಿ ನೂರಾರು ವಾಹನಗಳು, ಜನ ಜಂಗುಳಿ ಇರುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆ ಈ ಪ್ರದೇಶ ಕರಾಳ ರೂಪ ಪಡೆಯುತ್ತದೆ. ಜನರ ಜೀವಕ್ಕಿಲ್ಲಿ ಬೆಲೆಯೇ ಇಲ್ಲವಾಗುತ್ತದೆ. ಅದಕ್ಕೆ ಉದಾಹರಣೆ ಕಳೆದ ರಾತ್ರಿ ನಡೆದ ಎರಡು ಘಟನೆಗಳು.

shivamogga live subscribe New Kannada

ಆರೋಗ್ಯ ಸಮಸ್ಯೆ, ಅಪಘಾತ ಸಂಭವಿಸಿದರೆ ಪ್ರಾಥಮಿಕ ಚಿಕಿತ್ಸೆಗಾಗಿ ತುಮರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಸಂಜೆಯಾಗುತ್ತಿದ್ದಂತೆ ಡ್ಯೂಟಿ ಡಾಕ್ಟರ್ ಮನೆಗೆ ತೆರಳುತ್ತಾರೆ. ಇಬ್ಬರು ನರ್ಸಿಂಗ್ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಾರೆ. ತುರ್ತು ಸಂದರ್ಭ ಈ ಸಿಬ್ಬಂದಿಯೇ ಎಲ್ಲಾ ಚಿಕಿತ್ಸೆ ನೀಡಬೇಕಾಗುತ್ತದೆ.

ಲಾಂಚ್ ಇಲ್ಲದಿದ್ದರೆ ಹೊರಜಗತ್ತು ದೂರ

ಸಿಗಂದೂರು, ಶರಾವತಿ ಹಿನ್ನೀರಿನ ಮೇಲೆ ತೇಲುವ ಲಾಂಚ್ ಪ್ರವಾಸಿಗರ ಪಾಲಿಗೆ ಸ್ವರ್ಗದ ಅನುಭವ ನೀಡುತ್ತದೆ. ಆದರೆ ಸಂಜೆ 6 ಗಂಟೆ ಬಳಿಕ ಲಾಂಚ್ ಸೇವೆ ಸ್ಥಗಿತವಾಗುತ್ತದೆ. ಆ ಬಳಿಕ ಇಲ್ಲಿನ ನಿವಾಸಿಗಳಿಗೆ ಹೊರ ಜಗತ್ತು ಬಹಳ ದೂರವಾಗಿಬಿಡುತ್ತದೆ. ಸಾಗರದ ಆಸ್ಪತ್ರೆಗೆ ತೆರಳಲು 120 ಕಿ.ಮೀ ಸುತ್ತಿಕೊಂಡು ಬರಬೇಕು. ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡವರು, ಕಾಯಿಲೆಗೆ ತುತ್ತಾದವರು ಖಾಸಗಿ ವಾಹನಗಳಲ್ಲಿ 120 ಕಿ.ಮೀ ಸಂಚರಿಸುವುದು ಸುಲಭದ ಮಾತಲ್ಲ. ಇದೆ ಕಾರಣಕ್ಕೆ ಇಲ್ಲಿಗೆ ಆಂಬುಲೆನ್ಸ್ ಅವಶ್ಯತೆ ಇದೆ.

AVvXsEi1gI9L5sBIE1BcW6NrDJyoz4AIt0F9XaspiieA8nXVzMuUX47MDuYCmujelSlb9qSM6BC3Av8rqYRjuaGMbPODa3eNNGdbJs6UKFK6RojefBRisyK i KMs0wMj7sz776c9sFYhtGjTnjgDwjeXh3KsjIekJykiKH8nnONw 9JPYD8W87sjI1vT2EZtw=s926

ಹೋರಾಟ ಮಾಡಿ ಆಂಬುಲೆನ್ಸ್ ಪಡೆದಿದ್ದರು

ತುಮರಿ ಸುತ್ತಮುತ್ತ ಸುಮಾರು 20 ಸಾವಿರ ಜನ ಸಂಖ್ಯೆ ಇದೆ. ಇಷ್ಟೂ ಜನಕ್ಕೆ ಇದ್ದದ್ದು ಒಂದೇ 108 ಆಂಬುಲೆನ್ಸ್. 2014ಕ್ಕೂ ಮೊದಲು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಇರಲಿಲ್ಲ. ತುರ್ತು ಸಂದರ್ಭ ಕಾರ್ಗಲ್’ನಿಂದ ಆಂಬುಲೆನ್ಸ್ ಬರಬೇಕಿತ್ತು. ಜನರು ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿ ಒಂದು ಆಂಬುಲೆನ್ಸ್ ಮಂಜೂರು ಮಾಡಿಸಿಕೊಂಡಿದ್ದರು. ಆದರೆ ಅದೂ ಈಗ ಕಾಣೆಯಾಗಿದೆ.

108 ಆಂಬುಲೆನ್ಸ್’ಗೆ ನೂರೆಂಟು ವಿಘ್ನ

ಕಳೆದೊಂದು ತಿಂಗಳಿಂದ ತುಮರಿಯಿಂದ 108 ಆಂಬುಲೆನ್ಸ್ ಕಣ್ಮರೆಯಾಗಿದೆ. ರಿಪೇರಿಯ ನೆಪವೊಡ್ಡಿ ತುಮರಿಯಿಂದ ತೆರಳಿದ ಆಂಬುಲೆನ್ಸ್ ಮತ್ತೆ ಹಿಂತಿರುಗಿಲ್ಲ. ಬದಲಿ ವ್ಯವಸ್ಥೆ ಮಾಡಿ ಎಂದು ಜನರ ಬೇಡಿಕೊಂಡರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ತುರ್ತಾಗಿ ಅಂಬುಲೆನ್ಸ್ ಬೇಕು ಎಂದು 108ಕ್ಕೆ ಡಯಲ್ ಮಾಡಿದರೆ ಕಾರ್ಗಲ್’ನಿಂದ ಆಂಬುಲೆನ್ಸ್ ಬರಬೇಕು. ಅದು ಇಲ್ಲದಿದ್ದರೆ ಈ ಭಾಗದ ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸಿಕೊಂಡು ಸಾಗರ ತಲುಪಬೇಕು. ಇದೆ ಕಾರಣಕ್ಕೆ ಕಳೆದ ರಾತ್ರಿ ಹಸುಗೂಸು ಕಣ್ಣು ಬಿಡುವ ಮೊದಲೆ ಇಹಲೋಕ ಯಾತ್ರ ಮುಗಿಸಿದೆ.

ಆಂಬುಲೆನ್ಸ್’ಗಾಗಿ ಮತ್ತೆ ಹೋರಾಟದ ಎಚ್ಚರಿಕೆ

ಚದುರವಳ್ಳಿ ಚೈತ್ರಾ ಅವರಿಗೆ ಹೆರಿಗೆ ಮಾಡಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಾರಿನಲ್ಲಿ ಸಾಗರ ಆಸ್ಪತ್ರೆಗೆ ಕಳುಹಿಸಲಾಯಿತು. ರಾತ್ರಿ 10 ಗಂಟೆ ಹೊತ್ತಿಗೆ ಲಾಂಚ್ ಸಿಬ್ಬಂದಿ ಲಾಂಚ್ ಓಡಿಸಿ ಮಗು, ಬಾಣಂತಿಯನ್ನು ಮತ್ತೊಂದು ದಡಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಒಂದು ವೇಳೆ ಆಂಬುಲೆನ್ಸ್ ಇದ್ದಿದ್ದರೆ ಇವತ್ತು ಚಿತ್ರಣ ಬೇರೆಯದ್ದೆ ಇರುತ್ತಿತ್ತು. ಕಳೆದೊಂದು ತಿಂಗಳಿಂದ ಆಂಬುಲೆನ್ಸ್ ಇಲ್ಲದಿರುವುದರಿಂದ ಹಲವರು ಸಮಸ್ಯೆ ಅನುಭವಿಸಿದ್ದಾರೆ. ಇನ್ನಷ್ಟು ಸಮಸ್ಯೆಗೂ ಮೊದಲು ಆಂಬುಲೆನ್ಸ್ ಒದಗಿಸಬೇಕು ಎಂದು ಜನರು ಪಟ್ಟು ಹಿಡಿದಿದ್ದಾರೆ.

AVvXsEgs2CAQQwFXPEeKJ0M8TIYSuTjC1YFP87yReiHpVPmRryODfVeCXuFAqftB8kOZ5mPWZitv CEgSxJ 0UftK 3Xtg FQnjiLvzYXdPYIyMcbnCizoegDYgVDMGV3v1L2lUIeE2 3X339z1W9X2I3kEIgBbfYiP ZYP9tZPaJV64qH Ith d6U8fBL4P5A=s926

‘ಆಂಬುಲೆನ್ಸ್’ಗಾಗಿ ಶುಕ್ರವಾರ ತುಮರಿ ಪ್ರಾಥಮಿಕ ಆರೋಗ್ಯದ ಕೇಂದ್ರದ ಮುಂದೆ ಹೋರಾಟ ಮಾಡುತ್ತೇವೆ. ಇಷ್ಟೆಲ್ಲ ಆದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ’ ಎಂದು ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಅವರು ಬೇಸರ ವ್ಯಕ್ತಪಡಿಸಿದ್ದ್ದಾರೆ. ಶರಾವತಿ ಹಿನ್ನೀರಿನ ದ್ವೀಪದ ಜನರ ಬವಣೆಗೆ ಆದಷ್ಟು ಬೇಗ ಮುಕ್ತಿ ಸಿಗಬೇಕಿದೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ 108 ಆಂಬುಲೆನ್ಸ್’ಗೆ ಪರ್ಯಾಯ ವ್ಯವಸ್ಥೆ ಮಾಡುವತ್ತ ಯೋಚಿಸಬೇಕಿದೆ.

ಸಿಗಂದೂರು ದೇವಸ್ಥಾನ, ಇಲ್ಲಿಯ ಪ್ರಕೃತಿ ಸೊಬಗು, ಶರಾವತಿ ಹಿನ್ನೀರು, ಅದರ ಮೇಲೆ ತೇಲುವ ಲಾಂಚ್’ಗಳು ಪ್ರವಾಸಿಗರ ಪಾಲಿಗೆ ಸ್ವರ್ಗದ ಅನುಭವ ನೀಡುತ್ತದೆ. ಆದರೆ ಇಲ್ಲಿನ ವಾಸಿಗಳಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸದೆ ಸರ್ಕಾರ ಈ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article 161221 MLC DS Arun Press Meet in Shimoga ‘ಚುನಾವಣೆ ಮೊದಲು ಮೂರು ಭಾರಿ ಮತದಾರರ ಭೇಟಿ, 102 ಪ್ರಚಾರ ಸಭೆ’
Next Article SHIVAMOGGA-CITY-TALUK-NEWS- ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿ ಶಿವಮೊಗ್ಗದ ಆದರ್ಶ

ಇದನ್ನೂ ಓದಿ

SAGARA-NEWS-UPDATE
SAGARA

ಶರಾವತಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/05/2025
Minister-Madhu-Bangarappa-Press-meet-about-budget
SAGARA

ಜೋಗ ಜಲಪಾತಕ್ಕೆ ಇವತ್ತು ಮಿನಿಸ್ಟರ್‌ ಭೇಟಿ, ಅಧಿಕಾರಿಗಳ ಜೊತೆಗೆ ಮಹತ್ವದ ಮೀಟಿಂಗ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
12/05/2025
MP-BY-Raghavendra-visits-Siganduru-Bridge
SAGARA

ಸಿಗಂದೂರು ಸೇತುವೆ ಮೇಲೆ ಕಾರಿನಲ್ಲಿ ಸಂಸದ ರಾಘವೇಂದ್ರ ಸಂಚಾರ, ಪರಿಶೀಲನೆ ಬಳಿಕ ಹೇಳಿದ್ದೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
08/05/2025
SAGARA-NEWS-UPDATE
SAGARA

ಬಸ್‌ ಇಳಿದು ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಬೈಕ್‌ ಡಿಕ್ಕಿ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
07/05/2025
car-truck-mishap-at-hubli-five-member-succumbed
SAGARA

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಸಾಗರದ ಐವರು ಸ್ಥಳದಲ್ಲೇ ಸಾವು

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
06/05/2025
Ninasam-general-image
SAGARA

ನೀಸಾಸಂನಲ್ಲಿ ಐದು ದಿನ ನಾಟಕೋತ್ಸವ, ಉಚಿತ ಪ್ರವೇಶ, ಯಾವ್ಯಾವ ದಿನ ಯಾವ ನಟಕ ಪ್ರದರ್ಶನವಾಗಲಿದೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
02/05/2025
Previous Next
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?