ಶಿವಮೊಗ್ಗ ಲೈವ್.ಕಾಂ | SHIKARIPURA NEWS | 19 ಅಕ್ಟೋಬರ್ 2020
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇವತ್ತು ಲೋಕ ಕಲ್ಯಾಣಾರ್ಥವಾಗಿ ಮಹಾಮೃತ್ಯುಂಜಯ ಹೋಮ ನೆರವೇರಿಸಿದರು.
ಶಿಕಾರಿಪುರದ ಮಂಗಳಭವನದಲ್ಲಿ ಮಹಾಮೃತ್ಯುಂಜಯ ಹೋಮ ಮತ್ತು ಜಪ, ಉಮಾಮಹೇಶ್ವರ, ನವದುರ್ಗೆಮಾತೆಯರ, ನವಗ್ರಹಗಳ ಸ್ಥಾಪನೆ ಮತ್ತು ಗಣಾಧೀಶ್ವರರ ಸ್ಥಾಪನೆಯ ಪೂರ್ಣಾಹುತಿ ಕಾರ್ಯದಲ್ಲಿ ಸಿಎಂ ಭಾಗಿಯಾಗಿದ್ದರು.
ವಿಶ್ವದಾದ್ಯಂತ ಹಬ್ಬಿರುವ ಕರೋನ ನಿರ್ಮೂಲನೆ ಮತ್ತು ಅತಿವೃಷ್ಡಿಯಿಂದಾಗುತ್ತಿರುವ ತೊಂದರೆ ತಪ್ಪಿಸುವ ಸಲುವಾಗಿ ಹೋಮ ನೆರವೇರಿಸಲಾಗಿತ್ತು. ಸಂಸದ ಬಿ.ವೈ.ರಾಘವೇಂದ್ರ, ಅರುಣಾದೇವಿ, ಕಡೇನಂದಿಹಳ್ಳಿ ಮತ್ತು ಕಾಳೇನಹಳ್ಳಿ ಸ್ವಾಮೀಜಿ, ವೀರಶೈವ ಮಹಾಸಭಾದ ಅಧ್ಯಕ್ಷ ಈರೇಶ್ ಎನ್.ವಿ. ಮತ್ತು ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]