ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021
ತುಂಗಾ, ಭದ್ರಾ ಸಂಗಮ ಸ್ಥಳ ಕೂಡಲಿಯಲ್ಲಿ ಮತ್ತೆ ಮೊಸಳೆ ಭೀತಿ ಎದುರಾಗಿದೆ. ಇವತ್ತು ಬೆಳಗ್ಗೆಯಿಂದ ಮೊಸಳೆಯು ಸ್ನಾನ ಘಟದ ಬಳಿಗೆ ಬಂದು ಕುಳಿತಿದೆ.
ಕಳೆದ ವಾರ ಸ್ನಾನ ಘಟ್ಟದ ಎದುರು ಭಾಗದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇವತ್ತು ಸ್ನಾನ ಘಟ್ಟದ ಬಳಿಗೆ ಬಂದು ಕುಳಿತಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ.
ದಡದಲ್ಲೇ ನಿಂತ ಭಕ್ತರು
ಸ್ನಾನ ಘಟ್ಟದ ಬಳಿಗೆ ಮೊಸಳೆ ಬಂದಿರುವುದು ಬೆಳಗ್ಗೆ ಗೊತ್ತಾಗಿದೆ. ವಿವಿಧ ಪೂಜೆಗೆ ಬಂದು, ಪುಣ್ಯ ಸ್ನಾನ ಮಾಡಲು ಅಣಿಯಾಗಿದ್ದವರಿಗೆ ಸ್ಥಳೀಯರು ಮೊಸಳೆ ಇರುವ ವಿಚಾರ ತಿಳಿಸಿದ್ದಾರೆ. ಹಾಗಾಗಿ ಪುಣ್ಯ ಸ್ನಾನಕ್ಕೆ ಬಂದವರು ಸ್ನಾನ ಘಟ್ಟದ ಮೆಟ್ಟಿಲುಗಳ ಮೇಲೆ ನಿಂತಿದ್ದಾರೆ.
ಮೊಸಳೆ ಹಿಡಿಸುವಂತೆ ಆಗ್ರಹ
ಕಳೆದ ಕೆಲವು ದಿನದಿಂದ ಮಳೆ ಸುರಿದಿದ್ದು, ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ನೀರಿನ ಸೆಳೆತದೊಂದಿಗೆ ಮೊಸಳೆ ಕೂಡಲಿ ಭಾಗಕ್ಕೆ ಬಂದಿರುವ ಬಗ್ಗೆ ಶಂಕೆ ಇದೆ. ಪದೇ ಪದೇ ಮೊಸಳೆ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಭೀತಿ ಉಂಟು ಮಾಡಿದೆ. ಅರಣ್ಯ ಇಲಾಖೆಯವರು ಮೊಸಳೆಯನ್ನು ಹಿಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತುಂಗಾ, ಭದ್ರಾ ಸಂಗಮ ಸ್ಥಳ ಕೂಡಲಿಯಲ್ಲಿ ನೀರಿನಲ್ಲಿ ಮಿಂದೆದ್ದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯಿದೆ. ಹಾಗಾಗಿ ನಿತ್ಯ ಇಲ್ಲಿಗೆ ಭಕ್ತರು ಭೇಟಿ ಕೊಡುತ್ತಾರೆ. ಸ್ಥಳೀಯರು ಮುನ್ನೆಚ್ಚರಿಕೆ ನೀಡಿದರೂ ಕೆಲವೊಮ್ಮೆ ಭಕ್ತರು ಕ್ಯಾರೆ ಅನ್ನದೆ ಹೊಳೆಗೆ ಇಳಿಯುತ್ತಾರೆ. ಇಂತಹ ಸಂದರ್ಭ ಅನಾಹುತವಾಗುವ ಸಾಧ್ಯತೆ ಇದೆ ಎಂದು ಇಲ್ಲಿನವರು ಆರೋಪಿಸುತ್ತಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200