SHIVAMOGGA LIVE NEWS | 28 NOVEMBER 2022
ಶಿವಮೊಗ್ಗ : ಕಳೆದು ಹೋಗಿದ್ದ ಕತ್ತೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಮನೆ ಕಡೆಗೆ ಹೊಡೆದುಕೊಂಡು ಬರುವಾಗ ಬಸ್ ಡಿಕ್ಕಿ ಹೊಡೆದಿದೆ. ಐದು ಕತ್ತೆಗಳು (donkey death) ಸ್ಥಳದಲ್ಲೆ ಸಾವನ್ನಪ್ಪಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಿಳಘಟ್ಟದ ಶಿವಣ್ಣ ಎಂಬುವವರಿಗೆ ಸೇರಿದ 5 ಕತ್ತೆಗಳು ಸಾವನ್ನಪ್ಪಿವೆ. ಗಾಜನೂರು ಕ್ಯಾಂಪ್ ಗ್ರಾಮದ ಬಳಿ ಘಟನೆ ಸಂಭವಿಸಿದೆ.
(donkey death)
ಕಳೆದು ಹೋಗಿದ್ದ ಕತ್ತೆಗಳು
ಶಿವಣ್ಣ ಅವರು ಐದು ಕತ್ತೆಗಳನ್ನು ಸಾಕಿಕೊಂಡಿದ್ದರು. ಅವುಗಳ ಹಾಲು ಮತ್ತು ಗೊಬ್ಬರ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಕಳೆದ ಮೂರ್ನಾಲ್ಕು ದಿನದಿಂದ ಕತ್ತೆಗಳು ಕಣ್ಮರೆಯಾಗಿದ್ದವು. ಸಕ್ರೆಬೈಲು ಬಳಿ ಕತ್ತೆ ಇರುವುದು ಗೊತ್ತಾಗಿ, ಶಿವಣ್ಣ, ಮಾವ ಶೇಖರ, ಸ್ನೇಹಿತ ಮಂಜು ಅಲ್ಲಿಗೆ ತೆರಳಿದ್ದರು. ಬೆಳಗಿನ ಜಾವ 3.45ರ ಹೊತ್ತಿಗೆ ಕತ್ತೆಗಳನ್ನು ಅಲ್ಲಿಂದ ಹೊಡೆದುಕೊಂಡು ಬರುತ್ತಿದ್ದರು.
(donkey death)
ಕತ್ತೆಗಳಿಗೆ ಬಸ್ ಡಿಕ್ಕಿ
ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಕತ್ತೆಗಳನ್ನು ಹೊಡೆದುಕೊಂಡು ಬರುತ್ತಿದ್ದರು. ಆಗ ತೀರ್ಥಹಳ್ಳಿ ಕಡೆಯಿಂದ ಬಂದ ಖಾಸಗಿ ಬಸ್ ಕತ್ತೆಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂರು ಗಂಡು, ಎರಡು ಹೆಣ್ಣು ಕತ್ತೆಗಳು ಸ್ಥಳದಲ್ಲೆ ಸಾವನ್ನಪ್ಪಿವೆ.
ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿ, ಕತ್ತೆಗಳಿಗೆ ಡಿಕ್ಕಿ ಹೊಡೆಸಿದ ಚಾಲಕ ಶ್ರೀಧರ ಎಂಬಾತನ ವಿರುದ್ಧ ಶಿವಣ್ಣ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200