ಬೆಳಗ್ಗೆ ಜಮೀನಿಗೆ ಬಂದ ಶುಂಠಿ ಬೆಳೆಗಾರನಿಗೆ ಕಾದಿತ್ತು ಆಘಾತ, ಅದೇ ರೀತಿ ಮತ್ತೊಮ್ಮೆ ನಡೆಯಿತು ಕೃತ್ಯ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 10 MAY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

KUMSI : ಒಂದೇ ಜಮೀನಿನಲ್ಲಿ ಎರಡು ಬಾರಿ ಶುಂಠಿ ಕಳ್ಳತನವಾಗಿದೆ. ಬೆಳೆಗಾರ ಇಲ್ಲದ ಸಂದರ್ಭ ಗಮನಿಸಿ 9 ಕ್ವಿಂಟಾಲ್‌ ಶುಂಠಿ ಕಳವು ಮಾಡಿರುವ ಶಂಕೆ ಇದೆ ಎಂದು ಆರೋಪಿಸಲಾಗಿದೆ. ಹಿಟ್ಟಗೊಂಡನಕೊಪ್ಪ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಕುಂಸಿಯ ದೇವೇಂದ್ರ ಎಂಬುವವರು ಶುಂಠಿ ಬೆಳೆದಿದ್ದರು. ನಿತ್ಯ ಜಮೀನಿಗೆ ಹೋಗಿ ಬರುತ್ತಿದ್ದರು.

ಏಪ್ರಿಲ್‌ 29ರ ರಾತ್ರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು 7 ಕ್ವಿಂಟಾಲ್‌ ಶುಂಠಿ ಕಳವು ಮಾಡಲಾಗಿತ್ತು. ಈ ಹಿನ್ನೆಲೆ ರಾತ್ರಿ ವೇಳೆ ಜಮೀನಿನಲ್ಲಿ ದೇವೇಂದ್ರ ಕಾವಲು ಕಾಯಲು ಆರಂಭಿಸಿದರು. ಮೇ 4ರಂದು ಮದುವೆ ಸಮಾರಂಭಕ್ಕೆ ದೇವೇಂದ್ರ ತೆರಳಿದ್ದರು. ಆ ರಾತ್ರಿ ನಾಲ್ಕು ಚೀಲ ಶುಂಠಿ ಕಳುವಾಗಿತ್ತು. ಬೆಳೆಗಾರ ಇಲ್ಲದ ಸಂದರ್ಭವನ್ನೆ ಗಮನಿಸಿ 92 ಸಾವಿರ ರೂ. ಮೌಲ್ಯದ ಶುಂಠಿ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಆಗುಂಬೆ ಬಳಿ ಅಪಘಾತ, ಒಬ್ಬ ಸಾವು, ಕ್ಯಾಂಟರ್‌ ಜಖಂ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment