SHIVAMOGGA LIVE NEWS | 11 APRIL 2024
HOLEHONNURU : ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಸಂಗಮ ಸ್ಥಳದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹೊಳೆ ಜಾತ್ರೆ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ವಿವಿಧೆಡೆಯ ಸಾವಿರಾರು ಭಕ್ತರು ತುಂಗಾ, ಭದ್ರಾ ಸಂಗಮ ಸ್ಥಳದಲ್ಲಿ ಮಿಂದೆದ್ದು ಪುನೀತರಾದರು.
ಏನಿದು ಹೊಳೆ ಮಹೋತ್ಸವ?
ಯುಗಾದಿ ಹಬ್ಬದ ಮರು ದಿನ ಕೂಡ್ಲಿ ಗ್ರಾಮದ ತುಂಗಾ ಹಾಗೂ ಭದ್ರಾ ನದಿ ಸಂಗಮದಲ್ಲಿ ಜಾತ್ರೆ ನಡೆಯಲಿದೆ. ಸುತ್ತಮುತ್ತಲ ಗ್ರಾಮಗಳ ದೇವರಿಗೆ ವಿವಿಧ ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿ ತಮಟೆ, ಡೋಲು, ಡೊಳ್ಳು, ಜುಂಜುಂ ಮೇಳ ಇಂತಹ ನಾನಾ ವಾದ್ಯಗಳೊಂದಿಗೆ ಹೊಳೆ ಜಾತ್ರೆಗೆ ಕರೆದೊಯ್ಯಲಾಗುತ್ತದೆ. ಸಂಗಮೇಶ್ವರ ದೇವರ ಸನ್ನಿಧಿಯಲ್ಲಿ ಪುಣ್ಯ ತೀರ್ಥ ಅಭಿಷೇಕ, ಮಂಗಳಾರತಿ ಮಾಡಿಸಿ ವಿಜೃಂಭಣೆಯ ಮೆರವಣಿಗೆ ನಡೆಸಲಾಗುತ್ತದೆ.
ನವ ಸಂವತ್ಸರದ ಮೊದಲ ಹಬ್ಬ
ಸುಗ್ಗಿಕಾಲ ಮುಗಿದು ಹೊಸ ಸಂವತ್ಸರ ಮೊದಲ ಹಬ್ಬವಾಗಿರುವುದರಿಂದ ರೈತರು ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕುಟುಂಬದೊಂದಿಗೆ ಜಾತ್ರೆಗೆ ಬಂದು ಸುತ್ತಾಟ ನಡೆಸಿದರು. ಸಂಗಮ ಸ್ಥಳದಿಂದ ಹೊಳೆ ಜಾತ್ರೆ ನಡೆಯುವ ಸ್ಥಳಕ್ಕೆ ಉಕ್ಕಡದಲ್ಲಿ ಜನರು ತೆರಳಿ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಪೂಜೆ, ನಾಳೆ ರಂಜಾನ್ಗೆ ಸಿದ್ಧತೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200