SHIVAMOGGA LIVE NEWS
SHIMOGA | ಒಂದು ತಿಂಗಳು ಬಿಡುವು ನೀಡಿದ್ದ ಕಾಡಾನೆಗಳು (WILD ELEPHANTS RE ENTRY) ಪುನಃ ತೋಟ, ಗದ್ದೆಗೆ ನುಗ್ಗಿ ದಾಂಧಲೆ ಮಾಡಿವೆ. ಇದರಿಂದ ತೆಂಗು, ಅಡಕೆ, ಭತ್ತದ ಬೆಳೆ ಹಾನಿ ಉಂಟಾಗಿದೆ.
ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮದಲ್ಲಿ ತೋಟ, ಗದ್ದೆಗೆ ಆನೆಗಳು ದಾಳಿ ಮಾಡಿವೆ. ಇದರಿಂದ ಗ್ರಾಮಸ್ಥರಲ್ಲಿ ಪುನಃ ಕಾಡಾನೆ ಭೀತಿ ಆವರಿಸಿದೆ.
(WILD ELEPHANTS RE ENTRY)
ಎಲ್ಲೆಲ್ಲಿ ಏನೇನು ಹಾನಿ ಮಾಡಿದೆ?
ಉಂಬ್ಳೆಬೈಲು ಗ್ರಾಮದ ರೈತ ವಿಶ್ವನಾಥ ಗೌಡ ಅವರ ತೆಂಗಿನ ತೋಟಕ್ಕೆ ನುಗ್ಗಿರುವ ಕಾಡಾನೆಗಳು ತೆಂಗು ಮತ್ತು ಅಡಕೆ ಮರಗಳಿಗೆ ಹಾನಿ ಉಂಟು ಮಾಡಿದೆ. ಇನ್ನು, ಕೃಷ್ಣ ಎಂಬುವವರ ತೆಂಗಿನ ತೋಟಕ್ಕೆ ನುಗ್ಗಿ ಮರಗಳಿಗೆ ಹಾನಿ ಮಾಡಿವೆ. ಶಾಂತಮ್ಮ ಎಂಬುವವರಿಗೆ ಸೇರಿದ ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾನಿಗೊಳಿಸಿವೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಅನುಮಾನಾಸ್ಪದವಾಗಿ ಮಂಗಗಳ ಸಾವು, ಗ್ರಾಮಸ್ಥರಲ್ಲಿ ಆತಂಕ, ಅಧಿಕಾರಿಗಳು ಸ್ಥಳಕ್ಕೆ ದೌಡು
ಸುಮಾರು ಎರಡು ವರ್ಷದಿಂದ ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಉಂಬ್ಳೆಬೈಲು, ಲಕ್ಕಿನಕೊಪ್ಪ, ಜಂಕ್ಷನ್, ಗೋಣಿಬೀಡು ಸುತ್ತಮುತ್ತಲು ಆನೆಗಳು ಸಂಚರಿಸುತ್ತಿವೆ. ಕಳೆದ ಒಂದು ತಿಂಗಳಿಂದ ಈಚೆಗೆ ಆನೆಗಳ ಹಾವಳಿ ಕಡಿಮೆಯಾಗಿತ್ತು. ಆದರೆ ಗುರುವಾರ ಪುನಃ ಕಾಡಾನೆಗಳು ಪ್ರತ್ಯಕ್ಷವಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಕಾಂತಾರಾ ಸಿನಿಮಾ ಪೋಸ್ಟರ್ ಮೇಲೆ ಶಿವಮೊಗ್ಗದಲ್ಲಿ ಅವಹೇಳನಕಾರಿ ಬರಹ, ಕೇಸ್ ದಾಖಲು
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ