SHIVAMOGGA LIVE NEWS | 10 APRIL 2023
SORABA : ಕೆರೆ ಬೇಟೆಯಲ್ಲಿ (Kere Bete) ಪಾಲ್ಗೊಂಡಿದ್ದ ವ್ಯಕ್ತಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಶಿಕಾರಿಪುರದ ಹರಗಿ ಗ್ರಾಮ ಮಲ್ಲೇಶಪ್ಪ (60) ಎಂದು ಗುರುತಿಸಲಾಗಿದೆ. ಸೊರಬ ತಾಲೂಕು ಉರುಗನಹಳ್ಳಿಯಲ್ಲಿ ಘಟನೆ ಸಂಭವಿಸಿದೆ.
ಮಲ್ಲೇಶಪ್ಪ ಕೆರೆ ಬೇಟೆಯಲ್ಲಿ (Kere Bete) ಪಾಲ್ಗೊಂಡಿದ್ದರು. ಕೆರೆ ಬೇಟೆ ಆರಂಭವಾಗಿ ಸ್ವಲ್ಪ ದೂರದವರೆಗೆ ಹೋಗುತ್ತಿದ್ದಂತೆ ಮಲ್ಲೇಶಪ್ಪ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೆ ಅವರನ್ನು ದಡಕ್ಕೆ ಕರೆತಂದು ಉಪಚರಿಸಿ ಸೊರಬ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಮಲ್ಲೇಶಪ್ಪ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ – ದೇವರ ಕಾರ್ಯಕ್ಕೆ ಊರಿಗೆ ಹೋದವರಿಗೆ ಎದುರು ಮನೆಯವರಿಂದ ಬಂತು ಆಘಾತಕಾರಿ ಫೋನ್ ಕರೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200