ಶಿವಮೊಗ್ಗ ಲೈವ್.ಕಾಂ | HOSANGARA NEWS | 13 ಡಿಸೆಂಬರ್ 2021
ಅಡಕೆ ತುಂಬಿದ್ದ ಚೀಲ ಸಾಗಿಸುವಾಗ ಉಕ್ಕಡ ಮಗುಚಿ ಶರಾವತಿ ನದಿಯಲ್ಲಿ ಮುಳುಗಿ, ಇಬ್ಬರ ಪೈಕಿ ಒಬ್ಬ ನೀರು ಪಾಲಾಗಿದ್ದಾರೆ. ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಬಳಿ ಘಟನೆ ಸಂಭವಿಸಿದೆ.
ನಿಟ್ಟೂರಿನ ಮಾವಿನಗುಡ್ಡೆಯ ಸ್ವಾಮಿ ಮತ್ತು ಚಂಗೊಳ್ಳಿ ನಾರಾಯಣ ಅವರು ಭಾನುವಾರ ಮಧ್ಯಾಹ್ನ ಅಡಕೆ ಚೀಲಗಳನ್ನು ಉಕ್ಕಡಕ್ಕೆ ತುಂಬಿಕೊಂಡು ಹೊಳೆ ದಾಟುತ್ತಿದ್ದರು. ಈ ಸಂದರ್ಭ ಉಕ್ಕಡ ಮುಳುಗಿದೆ.
ಈಜಲಾಗದ ಮುಳುಗಿದರು
ನಾರಾಯಣ ತಕ್ಷಣ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಾಮಿ (45) ಅವರಿಗೆ ಈಜಿಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ.
ವಿಚಾರ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ವಾಮಿ ಹುಡುಕಲು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ನೀರಿನಲ್ಲಿ ಮುಳುಗಿದ್ದ ಉಕ್ಕಡ ಮತ್ತು ಅಡಕೆ ಚೀಲಗಳನ್ನು ಮೇಲೆತ್ತಲಾಗಿದೆ. ಸಂಜೆವರೆಗೆ ಕಾರ್ಯಾರಣೆ ನಡೆಸಿದರೂ ಸ್ವಾಮಿ ಪತ್ತೆಯಾಗಿಲ್ಲ.
ಇವತ್ತು ಬೆಳಗ್ಗೆಯಿಂದ ಪುನಃ ಕಾರ್ಯಾಚರಣೆ ನಡೆಸಿ ಸ್ವಾಮಿ ಪತ್ತೆ ಕಾರ್ಯ ನಡೆಸಲಾಗುತ್ತದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.