ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 7 ಫೆಬ್ರವರಿ 2022
ಬೆಂಗಳೂರು – ತಾಳಗುಪ್ಪ ಇಂಟರ್ ಸಿಟಿ ರೈಲಿನಲ್ಲಿ ಪ್ರಯಾಣಿಕರೊಬ್ಬರ ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನ ಮಾಡಲಾಗಿದೆ.
ಸಾಗರ ತಾಲೂಕಿನ ಹೊನ್ನೆಮರಡು ಗ್ರಾಮದ ಎಸ್.ಎಲ್.ಎನ್. ಸ್ವಾಮಿ ಅವರ ಬ್ಯಾಗ್ ಕಳುವಾಗಿದೆ. ಸ್ವಾಮಿ ಅವರು ಶುಕ್ರವಾರ ರಿಸರ್ವ್ ಕೋಚ್ನಲ್ಲಿ ಬೆಂಗಳೂರಿನಿಂದ ಅನಂದಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಬ್ಯಾಗ್ ಇಟ್ಟುಕೊಂಡು ನಿದ್ರೆಗೆ ಜಾರಿದ್ದರು.
ಆನಂದಪುರದಲ್ಲಿ ಎಚ್ಚರಗೊಂಡಾಗ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್ ಇದ್ದ ಬ್ಯಾಗ್ ಕಳವು ಆಗಿರುವುದು ಗಮನಕ್ಕೆ ಬಂದಿದೆ. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
About Shivamogga Live | Shimoga District Profile | Whatsapp 7411700200