SHIVAMOGGA LIVE NEWS | 13 DECEMBER 2022
ಶಿವಮೊಗ್ಗ : ದೇವಸ್ಥಾನದ (kudli temple) ಬಾಗಿಲಿನ ಬೀಗ ಒಡೆದು ದೇವರ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಕೂಡ್ಲಿಯ ಗ್ರಾಮದ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ.
ದೇವರ (kudli temple) ಬೆಳ್ಳಿ ಕಿರೀಟ, ಬೆಳ್ಳಿ ಕಿವಿ, ಬೆಳ್ಳಿ ಕಣ್ಣು, ಬೆಳ್ಳಿ ಮೂಗು, ಬೆಳ್ಳಿ ನಾಲಗೆ, ಬೆಳ್ಳಿ ಮೀಸೆ, ಶಂಕಚಕ್ರ, ಬೆಳ್ಳಿ ಸೇವಂತಿಗೆ ಸರ, ಬೆಳ್ಳಿಯ ಎರಡು ಕಾಲು ದೀಪ, ಬೆಳ್ಳಿ ಸಾಲಿಗ್ರಾಮ, ಬೆಳ್ಳಿಯ ತುಳಸಿ ಸರ ಸೇರಿ 2 ಕೆ.ಜಿ 75 ಗ್ರಾಂ ತೂಕದ ಬೆಳ್ಳಿ ಆಭರಣ ಕಳ್ಳತನವಾಗಿದೆ. 5 ಕೆ.ಜಿ. ಹಿತ್ತಾಳೆ ಪಾತ್ರೆ ಮತ್ತು ಇತರೆ ವಸ್ತುಗಳು ಕಳುವಾಗಿದೆ. ಇವುಗಳಿಗೆ 1.06 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ಭದ್ರಾವತಿ – ಶಿವಮೊಗ್ಗ ನಡುವೆ ಕೈಕೊಟ್ಟ ಇಂಟರ್ ಸಿಟಿ ರೈಲು ಇಂಜಿನ್
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.