ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 06 JANUARY 2021
ತೀರ್ಥಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಾರಿಗೆ ಬಸ್ ಸಂಚಾರ ಆರಂಭವಾಗದೆ ಇರುವುದರಿಂದ ವಿದ್ಯಾರ್ಥಿಗಳು ಶಾಲೆ ಬರಲು ಸಮಸ್ಯೆ ಆಗುತ್ತಿದೆ. ಕೂಡಲೆ ಬಸ್ ಸಂಚಾರ ಪುನಾರಂಭ ಮಾಡಬೇಕು ಅಂತಾ ತೀರ್ಥಹಳ್ಳಿ ಜೆಡಿಎಸ್ ಘಟಕದ ವತಿಯಿಂದ ಒತ್ತಾಯಿಸಲಾಗಿದೆ.
ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಸಾರಿಗೆ ಸೌಕರ್ಯವಿಲ್ಲದೆ ಇರುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಗಣನೀಯ ಕುಸಿದಿದೆ ಎಂದು ಆರೋಪಿಸಿದರು.
ತಾಲೂಕಿನ ಹೆದ್ದೂರು, ಕಟ್ಟೆಹಕ್ಕಲು, ಕೋಣಂದೂರು, ಮೃಗವಧೆ, ಹಾರೋಗೊಳಿಗೆ, ಹರಳಿಮಠ, ಮುನ್ನೂರು, ಕಮಕಾರು, ಸಿಂಗನಬಿದರೆ ಸೇರಿದಂತೆ ಹಲವು ಕಡೆಗೆ ಬಸ್ ವ್ಯವಸ್ಥೆ ಇಲ್ಲ. ಇದು ವಿದ್ಯಾರ್ಥಿಗಳಿಗೆ ತೀವ್ರ ಸಂಕಷ್ಟವನ್ನು ಉಂಟು ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಿದ್ದ ಬಸ್ಸುಗಳನ್ನು ನಿಲ್ಲಿಸಲಾಗಿದೆ. ಕೂಡಲೆ ಬಸ್ ಸಂಚಾರ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಎಲ್.ಸುಂದರೇಶ್, ಪ್ರಮುಖರಾದ ಕಿರಣ್ ಕಟ್ಟೆಹಕ್ಲು, ನಾಗರಾಜ್ ಪೂಜಾರಿ ಕುರುವಳ್ಳಿ, ಜೀನಾ ವಿಕ್ಟರ್ ಡಿಸೋಜಾ, ಅಶ್ವಲ್ ಗೌಡ, ಶಫಿ ಇಂದಿರಾನಗರ, ನವೀನ್ ಸಿಂಗನಬಿದರೆ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]