ಶಿವಮೊಗ್ಗ ಲೈವ್.ಕಾಂ | 17 ಮೇ 2019
ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆ ಪುನಾರಂಭ ಮಾಡುವಂತೆ ನಿರಂತರ ಹೋರಾಟಗಳು ನಡೆಯುತ್ತಿವೆ. ಈಗ ಈ ಹೋರಾಟ ಆನ್’ಲೈನ್ ರೂಪ ಪಡೆದಿದೆ. ಎಂಪಿಎಂ ಪುನಾರಂಭವಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿದೆ.
ಕಾರ್ಖಾನೆ ಪುನಾರಂಭ ಮಾಡುವಂತೆ, ಭದ್ರಾವತಿಯ ಯುವಕರು ಟ್ವಿಟರ್’ನಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟ್ಯಾಗ್ ಮಾಡಿ, ತಮ್ಮ ಮನವಿ ಸಲ್ಲಿಸುತ್ತಿದ್ದಾರೆ.
ಎಂಪಿಎಂ ಕಾರ್ಖಾನೆ ಮುಚ್ಚಿರುವುದರಿಂದ ಕಾರ್ಮಿಕರು ಮತ್ತು ಅವರ ಕುಟುಂಬ ಸಂಕಷ್ಟದಲ್ಲಿದೆ. ಹಾಗಾಗಿ ಕಾರ್ಖಾನೆ ಪುನಾರಂಭ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. #ReopenMysorePaperMills ಮತ್ತು #MPM_Bhadravathi ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್’ಗಳನ್ನು ಮಾಡಲಾಗುತ್ತಿದೆ.
ಎಂಪಿಎಂ ಪುನಾರಂಭ ಮಾಡುವಂತೆ ಈವರೆಗೂ ಸಾವಿರ ಟ್ವೀಟ್’ಗಳು ಬಂದಿವೆ. ಇದರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಮುಖ ಟ್ವೀಟ್’ಗಳು ಇಲ್ಲಿವೆ..
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]