ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 ಅಕ್ಟೋಬರ್ 2020
ಭದ್ರಾ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ನೀರಿನಿಂದ ಮೇಲೆತ್ತಲಾಗಿದೆ.
ಮೃತರನ್ನು ಜನ್ನಾಪುರದ ರಾಜೇಶ್ (38) ಮತ್ತು ಮನೋಜ್ (17) ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಇರುವ ಸುಳಿಗೆ ಸಿಲುಕಿ ಇವರು ನೀರಿನಲ್ಲಿ ಮುಳುಗಿರುವ ಶಂಕೆ ಇದೆ.
ಹೇಗಾಯ್ತು ಘಟನೆ?
ಭದ್ರಾವತಿಯ ದೊಡ್ಡಗೋಪೇನಹಳ್ಳಿ ಬಳಿಯ ಗೋಂಧಿ ಚಾನೆಲ್ ಆಂಜನೇಯ್ ಬಂಡ ಬಳಿ ಘಟನೆ ಸಂಭವಿಸಿದೆ. ಈ ಭಾಗದ ಭದ್ರಾ ನದಿಯಲ್ಲಿ ಸುಳಿಗಳಿವೆ.
ಯುವಕರ ಗುಂಪೊಂದು ಇವತ್ತು ಭದ್ರಾ ನದಿಯಲ್ಲಿ ಈಜಲು ಬಂದಿತ್ತು. ಮನೋಜ್ ಸುಳಿಗೆ ಸಿಲುಕಿರುವ ಸಿಲುಕಿ ಮುಳುಗುತ್ತಿದ್ದರು. ರಕ್ಷಣೆಗಾಗಿ ಕೂಗಿದ್ದು, ರಾಜೇಶ್ ಧಾವಿಸಿದ್ದಾರೆ. ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಮುಳುಗುತ್ತಿದ್ದ ಮತ್ತೊಬ್ಬ ಯುವಕನನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಮೇಲೆತ್ತಲಾಗಿದೆ. ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]