SHIVAMOGGA LIVE NEWS | 22 ಮಾರ್ಚ್ 2022
ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಇವತ್ತು ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ತುಂಗಾ ಕಾಲೇಜು ಪ್ರಥಮ ವರ್ಷದ ಬಿ.ಎ. ಪದವಿ ವಿದ್ಯಾರ್ಥಿ ವರ್ಧನ್ (19) ಮತ್ತು ಎಲೆಕ್ಟ್ರಾನಿಕ್ ಅಂಗಡಿ ಕೆಲಸಗಾರ ಸೊನಲೆ ಮಂಜು (20) ಮೃತರು.
ತೀರ್ಥಹಳ್ಳಿಯ ತುಂಗಾ ನದಿ ರಾಮ ಮಂಟಪದ ಬಳಿ ವರ್ಧನ್ ಮತ್ತು ಮಂಜು ಈಜಲು ತೆರಳಿದ್ದರು. ಸೋಮವಾರ ಮಧ್ಯಾಹ್ನ ಘಟನೆ ಸಂಭವಿಸಿದೆ. ಈ ಸಂದರ್ಭ ಮುಳುಗಿ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಇವತ್ತು ಇಬ್ಬರ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200