ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 06 FEBRUARY 2021
ತೀರ್ಥಹಳ್ಳಿಯ ಕುರುವಳ್ಳಿ ಪುತ್ತಿಗೆ ಮಠದ ತಿರುವಿನಲ್ಲಿ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಡಕೆ ತಟ್ಟೆಯಲ್ಲಿ ಅನ್ನ ಮತ್ತು ಮೊಟ್ಟೆ ಇರಿಸಿ, ಕುಂಕುಮ ಹಾಕಿ ಇಡಲಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.14ರಲ್ಲಿ ಪ್ರಕರಣ ವರದಿಯಾಗಿದೆ. ಮೊಟ್ಟೆ ಮೇಲೆ ಕೆಲವು ಅಕ್ಷರಗಳನ್ನು ಬರೆಯಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮೊಟ್ಟೆ ಮೇಲೆ ಏನೇನು ಬರೆಯಲಾಗಿದೆ ಎಂದು ಸ್ಪಷ್ಟವಾಗಿಲ್ಲ.
ವಾಮಾಚಾರ ನಡೆದಿದೆ ಎಂಬ ಶಂಕೆ ಹಿನ್ನೆಲೆ, ಹೆಚ್ಚಿನ ಸಂಖ್ಯೆಯ ಜನರು ಸ್ಥಳಕ್ಕೆ ಸೇರಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]