ಶಿವಮೊಗ್ಗ ಲೈವ್.ಕಾಂ | BHADRAVATHI | 16 ನವೆಂಬರ್ 2019
ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ಎರಡನೆ ದಿನವು ಮುಂದುವರೆದಿದೆ. ಇವತ್ತು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಾರ್ಖಾನೆ ಗೇಟ್ ಮುಂದೆ ಆಹೋರಾತ್ರಿ ಧರಣಿ ನಡೆಸಿದ ಗುತ್ತಿಗೆ ಕಾರ್ಮಿಕರು, ಬೆಳಗ್ಗೆಯಿಂದಲೆ ಪ್ರತಿಭಟನೆ ಶುರ ಮಾಡಿದ್ದರೆ.
ಮತ್ತೆ ಗೇಟ್’ಗೆ ಬೀಗ ಹಾಕಿ ಆಡಳಿತ ಮಂಡಳಿ
ವಿಐಎಸ್ಎಲ್ ಗೇಟಿಗೆ ಇವತ್ತು ಮತ್ತೊಮ್ಮೆ ಬೀಗ ಹಾಕಲಾಗಿತ್ತು. ಇದು ಪ್ರತಿಭಟನಾಕಾರರನ್ನು ರೊಚ್ಚಿಗೇಳಿಸಿತು. ಕೂಡಲೇ ಗೇಟ್ ತೆಗೆದು, ಗುತ್ತಿಗೆ ಕಾರ್ಮಿಕರಿಗೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
ಕಾವು ಪಡೆದುಕೊಳ್ಳುತ್ತಿದೆ ಹೋರಾಟ
ಕಾರ್ಮಿಕರ ಹೋರಾಟ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಗುತ್ತಿಗೆ ಕಾರ್ಮಿಕರ ಕುಟುಂಬದವರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಾಗುತ್ತಿದೆ. ಸಂಜೆ ವೇಳೆಗೆ ಪ್ರತಿಭಟನೆ ತೀವ್ರ ರೂಪ ಪಡೆದುಕೊಳ್ಳುವ ಸಾದ್ಯತೆ ಇದೆ.
ರೋಡ್’ಗಳು ಬ್ಲಾಕ್
ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ, ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ. ಕಾರ್ಖಾನೆ ಗೇಟ್ ಮುಂದೆ ಬ್ಯಾರಿಕೇಡ್’ಗಳನ್ನು ಹಾಕಲಾಗಿದೆ. ಬಸ್ ನಿಲ್ದಾಣದಿಂದ ಕಾರ್ಖಾನೆ ಕಡೆಗೆ ಬರುವ ರಸ್ತೆ, ಜಯಶ್ರೀ ಸರ್ಕಲ್’ನಿಂದ ವಿಐಎಸ್ಎಲ್ ಗೇಟ್ ಕಡೆಗೆ ಬರುವ ರಸ್ತೆಗಳನ್ನು ಬ್ಲಾಕ್ ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ. ದ್ವಿಚಕ್ರ ವಾಹನಗಳಷ್ಟೆ ಸದ್ಯಕ್ಕೆ ಇಲ್ಲಿ ಸಂಚರಿಸುತ್ತಿವೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]