ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 19 ಆಗಸ್ಟ್ 2019
ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟುಗಳನ್ನು ತೆರೆದು ಮತ್ತೊಮ್ಮೆ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 185.1 ಅಡಿ ತಲುಪಿದ ಹಿನ್ನೆಲೆಯಲ್ಲಿ ಗೇಟ್ ತೆರೆಯಲಾಗಿದೆ.
ಗೇಟನ್ನು ಅರ್ಧ ಅಡಿಯಷ್ಟು ಮೇಲಕ್ಕೆತ್ತಲಾಗಿದ್ದು, 4,400 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಭದ್ರಾ ಹಿನ್ನೀರು ಮಳೆ ನಿರಂತರವಾಗಿ ಆಗುತ್ತಿರುವುದರಿಂದ, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚುತ್ತಿದೆ.
ಆಗಸ್ಟ್ 10ರಂದು ಜಲಾಶಯದ ಗೇಟು ತೆಗೆದು, 6 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿತ್ತು. ಆದರೆ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಮರುದಿನವೇ ಗೇಟ್ ಬಂದ್ ಮಾಡಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]