SHIVAMOGGA LIVE NEWS | 25 DECEMBER 2022
ಹೊಸನಗರ : ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ (wild elephant problem) ಹಾವಳಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಭತ್ತ, ಶುಂಠಿ, ಅಡಕೆ ಗಿಡಗಳು ನಾಶವಾಗಿವೆ. ನೀರಿನ ಪೈಪುಗಳನ್ನು ಕೂಡ ಅನೆಗಳು ಧ್ವಂಸ ಮಾಡಿವೆ.
ಗಾಮನಗದ್ದೆ, ಅಡ್ಡೇರಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ. ಕೊಯ್ಲು ಮುಗಿಸಿ ಹಾಕಿದ್ದ ಭತ್ತ, ಹುಲ್ಲನ್ನು ಹಾನಿಗೆಡವಿವೆ. ಹೊರಬೈಲಿನ ಎಲೆಬಳ್ಳಿ ಮಂಜಪ್ಪ ಶುಂಠಿ ಮತ್ತು ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡಿವೆ. ಗಾಮನಗದ್ದೆಯ ಹರಿಗೆಕೊಪ್ಪದ ನಾರಾಯಣಪ್ಪ ಅವರ ಜಮೀನಿನಲ್ಲಿ ಕೊಯ್ಲು ಮಾಡಿದ್ದ ಭತ್ತ ಹಾನಿಗೆಡವಿವೆ. (wild elephant problem)
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಕುಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಪ್ಲಾನ್, ಹಳ್ಳಿಗಳನ್ನು ಜನರೆ ಸೂಚಿಸಬಹುದು
ಆನೆಗಳ ಉಪಟಳಕ್ಕೆ ಮನೆಯಿಂದ ಹೊರ ಬರಲು ಜನರು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾಡಾನೆಗಳ ಹಾವಳಿ ತಡೆ ಕಷ್ಟವಾಗಿದೆ.