SHIVAMOGGA LIVE NEWS | 21 FEBRURARY 2023
THIRTHAHALLI : ತುಂಗಾ ನದಿಯಲ್ಲಿ (Tunga River) ಮುಳುಗಿ ಯುವಕ ಮೃತಪಟ್ಟಿದ್ದಾನೆ. ದೇವಸ್ಥಾನಕ್ಕೆ ಹೋಗಿ ಮರಳುವಾಗ ಘಟನೆ ಸಂಭವಿಸಿದೆ.
ಸಾಲೂರು ಸಮೀಪದ ತೆಂಗಿನ ಕೊಪ್ಪ ಗ್ರಾಮದ ಪ್ರಜತ್ (28) ಮೃತ ಯುವಕ. ಹೊನ್ನಾನಿ ಗ್ರಾಮದ ಸೋದರ ಮಾವನ ಮನಗೆ ಪ್ರಜತ್ ಬಂದಿದ್ದರು. ನದಿ (Tunga River) ದಾಟಿ ಕಾಸರವಳ್ಳಿ ಗ್ರಾಮದ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದರು. ಈ ವೇಳೆ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ – ಅಡಕೆ ವ್ಯಾಪಾರಿ ಮೇಲೆ ಅಟ್ಯಾಕ್, ಕಂತೆ ಕಂತೆ ದುಡ್ಡಿನ ಜೊತೆ ಸಿಕ್ಕಿಬಿತ್ತು ದರೋಡೆ ಗ್ಯಾಂಗ್
ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.