ಶಿವಮೊಗ್ಗ ಲೈವ್.ಕಾಂ |SHIMOGA NEWS | 25 ಅಕ್ಟೋಬರ್ 2021
ರಸ್ತೆಯಲ್ಲಿ ಸಿಕ್ಕ 50 ಸಾವಿರ ರೂ. ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ರಸ್ತೆ ಬದಿಯಲ್ಲಿ ಹಣ ಪತ್ತೆಯಾಗಿತ್ತು.
ಶಿವಮೊಗ್ಗದ ಎಪಿಎಂಸಿ ಗೇಟ್ ಬಳಿ 50 ಸಾವಿರ ರೂ. ಹಣದ ಕಟ್ಟು ಬಿದ್ದಿತ್ತು. ಅದೇ ದಾರಿಯಲ್ಲಿ ಬರುತ್ತಿದ್ದ ಸಾಗರ ತಾಲೂಕು ಆವಿನಹಳ್ಳಿಯ ಶ್ರೀವತ್ಸ ಎಸ್.ರಾವ್ ಅವರು ಹಣವನ್ನು ವಿನೋಬನಗರ ಪೊಲೀಸ್ ಠಾಣೆಗೆ ತಲುಪಿಸಿದ್ದರು.
ಚೀಟಿಯಿಂದ ಪತ್ತೆಯಾದ ವಾರಸುದಾರರು
ಹಣದ ಜೊತೆಗೆ ಇದ್ದ ಚೀಟಿಯಿಂದಾಗಿ ವಾರಸುದಾರರನ್ನು ಪತ್ತೆ ಹಚ್ಚಲು ಸುಲಭವಾಯಿತು. ಚೀಟಿಯಲ್ಲಿ ವಾರಸುದಾರರ ವಿಳಾಸವಿತ್ತು. ಇದರ ಆಧಾರದಲ್ಲಿ ವಾರಸುದಾರರನ್ನು ಪತ್ತೆ ಹಚ್ಚಿ ಹಣವನ್ನು ಹಿಂತಿರುಗಿಸಲಾಯಿತು.
ವಾರಸುದಾರರನ್ನು ಠಾಣೆಗೆ ಕರೆಯಿಸಿ ಶ್ರೀವತ್ಸ ಅವರಿಂದಲೇ ಹಣವನ್ನು ಹಿಂತಿರುಗಿಸಲಾಯಿತು.