ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಳ ಮಾಡ್ತೀವಿ ಅಂತಾ ಭದ್ರಾವತಿಯ ಮಹಿಳೆಗೆ 1.10 ಲಕ್ಷ ರೂ. ವಂಚನೆ, ಹೇಗಾಯ್ತು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
➤ ಸುದ್ದಿಯ ಮುಂದಿನ 14 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 10 JANUARY 2021

ಬ್ಯಾಂಕ್‍ನಿಂದ ಕರೆ ಮಾಡುತ್ತಿರುವುದಾಗಿ ನಂಬಸಿ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್‍ ಖಾತೆಗೆ ಖದೀರಿಮರು ಕನ್ನಾ ಹಾಕಿದ್ದಾರೆ. ಭದ್ರಾವತಿಯ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ಅಕೌಂಟ್‍ನಿಂದ 1.10 ಲಕ್ಷ ರೂ. ಲಪಟಾಯಿಸಲಾಗಿದೆ.

ಭದ್ರಾವತಿಯ ಎಂ.ಎಂ.ಕಾಂಪೌಂಡ್‍ನ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ಖಾತೆಯಿಂದ ಒಮ್ಮೆ 80 ಸಾವಿರ ರೂ. ಮತ್ತೊಮ್ಮೆ 30 ಸಾವಿರ ಹಣವನ್ನು ಲಪಟಾಯಿಸಲಾಗಿದೆ.

ಇದನ್ನೂ ಓದಿ | ಸರ್ಕಾರಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಭದ್ರಾವತಿಯ ವ್ಯಕ್ತಿಗೆ ಒಂದು ಲಕ್ಷ ರೂ. ವಂಚನೆ

ಖದೀಮರ ಕೈ ಚಳಕ ಹೇಗಿತ್ತು?

ಈ ಮಹಿಳೆಗೆ ಸ್ಟೇಟ್ ಬ್ಯಾಂಕ್ ಆಫ್‍ ಇಂಡಿಯಾ (ಎಸ್‍ಬಿಐ) ಕ್ರೆಡಿಟ್ ಕಾರ್ಡ್‍ ಸೇವೆ ಒದಗಿಸಿತ್ತು.

ಕ್ರೆಡಿಟ್ ಕಾರ್ಡ್‍ ಬರುವ ಮೊದಲೆ ಖದೀಮರಿಗೆ ಅದರ ಮಾಹಿತಿ ಲಭ್ಯವಾಗಿತ್ತು. ನಾಲ್ಕು ಬೇರೆ ಬೇರೆ ಮೊಬೈಲ್‍ ನಂಬರ್‍ಗಳಿಂದ ಕರೆ ಮಾಡಿ, ಕ್ರೆಡಿಟ್ ಕಾರ್ಡ್ ತಲುಪಿದೆಯೇ ಎಂದು ವಿಚಾರಿಸಿಕೊಂಡಿದ್ದರು.

ಇದನ್ನೂ ಓದಿ | ಹಣ ಡ್ರಾ ಮಾಡಿಲ್ಲ, ಆನ್‌ಲೈನ್‌ ವ್ಯವಹಾರವು ಆಗಿಲ್ಲ, ಆದರೂ ಉದ್ಯಮಿಯ ಖಾತೆಯಿಂದ 83 ಸಾವಿರ ಮಾಯ

ಮಹಿಳೆಗೆ ಕ್ರಿಡಿಟ್ ಕಾರ್ಡ್‍ ತಲುಪಿದ ಬಳಿಕವು ಕರೆ ಮಾಡಿದ ಖದೀಮರು, ತಾವು ಎಸ್‍ಬಿಐ ಬ್ಯಾಂಕ್‍ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಕ್ರೆಡಿಟ್ ಲಿಮಿಟ್ ಹೆಚ್ಚಳ ಮಾಡಬೇಕು. ಇಲ್ಲವಾದಲ್ಲಿ ಕಾರ್ಡ್ ಕ್ಯಾನ್ಸಲ್ ಆಗಲಿದೆ ಎಂದು ಬೆದರಿಸಿದರು.

ಕ್ರೆಡಿಟ್ ಲಿಮಿಟ್ ಹೆಚ್ಚಳ ಮಾಡುವುದಾಗಿ ನಂಬಿಸಿ ಒಟಿಪಿ ಪಡೆದ ಖದೀಮರು, ಎಂಎಸ್‍ಡಬ್ಲು ಷಾ ಎಂಟರ್‍ಪ್ರೈಸಸ್ ಹೆಸರಿಗೆ ಮೊದಲಿಗೆ 80 ಸಾವಿರ ರೂ. ಹಣ ಡ್ರಾ ಮಾಡಿದ್ದಾರೆ. ಮತ್ತೊಮ್ಮೆ ಅದೇ ಸಂಸ್ಥೆಯ ಹೆಸರಿಗೆ 30 ಸಾವಿರ ರೂ. ಹಣ ಡ್ರಾ ಮಾಡಿದ್ದಾರೆ.

ಕ್ರೆಡಿಟ್ ಕಾರ್ಡ್‍ನಿಂದ 1.10 ಲಕ್ಷ ರೂ. ಹಣ ಡ್ರಾ ಆಗಿರುವ ಮೆಸೇಜು ಬಂದ ಹಿನ್ನೆಲೆ, ಮಹಿಳೆ ಬ್ಯಾಂಕನ್ನು ಸಂಪರ್ಕಿಸಿದ್ದಾರೆ.

ವಂಚನೆಗೊಳಗಾದ ವಿಚಾರ ಅರಿವಿಗೆ ಬರುತ್ತಿದ್ದಂತೆ ಭದ್ರಾವತಿ ಓಲ್ಡ್ ಟೌನ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment