SHIMOGA | ಪೆಟ್ರೋಲ್ ಬೆಲೆ ಏರುತ್ತಿದೆ, ಜಿಡಿಪಿ ಕುಸಿಯುತ್ತಿದೆ, ಕೇಂದ್ರ ಸರ್ಕಾರದ್ದು ಕಾಗದದ ಮೇಲಿನ ಬಜೆಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021

ಕೇಂದ್ರದ ಸರ್ಕಾರದ್ದು ಕಾಗದದ ಬಜೆಟ್ ಹೊರತು ಕಾರ್ಯಗವಾಗದ ಬಜೆಟ್ ಎಂದು ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್, ಕೇಂದ್ರದ ಬಜೆಟ್ ನಿರಾಶದಾಯಕವಾಗಿದೆ. ಇದೊಂದು ಜನವಿರೋಧಿ, ರೈತವಿರೋಧಿ, ಕಾರ್ಮಿಕ ವಿರೋಧಿ ಮತ್ತು ಕಳಪೆ ಬಜೆಟ್ ಆಗಿದೆ. ಇದರಲ್ಲಿ ಘೋಷಣೆ ಮಾಡಿರುವ ಯಾವ ಭರವಸೆಗಳು ಈಡೇರುವುದಿಲ್ಲ. ಇದೊಂದು ಡಿಜಿಟಲ್ ಬಜೆಟ್ ಮಾತ್ರ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ

ಕೃಷಿ ಉತ್ಪನ್ನಗಳಿಗೆ ಸೆಸ್ ಹಾಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಸಿದ್ದಾರೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಸಲಾಗಿದೆ. ದಿನಸಿ ಬೆಲೆಗಳು ಗಗನಕ್ಕೇರಿದೆ. ಕೃಷಿ, ಆರೋಗ್ಯ, ಶಿಕ್ಷಣ ಹೀಗೆ ಎಲ್ಲಾ ರಂಗಕ್ಕೂ ಆದ್ಯತೆ ನೀಡಿಲ್ಲ. ಜಿ.ಡಿ.ಪಿ.ಕುಸಿದಿದೆ, ಉದ್ಯೋಗ ಭರವಸೆಗಳಿಲ್ಲ, ದೇಶದ ಸಾಲ ಹೆಚ್ಚಿದೆ, ಶೇ 20 ರಷ್ಟು ಬಡ್ಡಿ ಕಟ್ಟುತ್ತಿದ್ದೇವೆ. ಯಥಾ ಪ್ರಕಾರ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಅಂಬಾನಿ, ಅದಾನಿ, ಟಾಟಾ ಬಿರ್ಲಾ ಮುಂತಾದ ಉದ್ಯಮಗಳ ಏಜೆಂಟ್ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಹಾಗಾಗಿ ಇದು ಜನವಿರೋಧಿ ಕಳಪೆ ಬಜೆಟ್ ಆಗಿದೆ ಎಂದರು.

ನಿರ್ಮಲಾ ಸೀತರಾಮನ್ ಅವರು ಈ ಹಿಂದೆ ಮಂಡಿಸಿದ ಬಜೆಟ್‍ನಲ್ಲಿ ಆದ ಘೋಷಣೆಗಳು ಕಾಗದದಲ್ಲೇ ಉಳಿದಿದೆ. ಸ್ವಚ್ಚ ಭಾರತದ ಹೆಸರು ಹೇಳುತ್ತಾ ಬಂದಿದ್ದ ಬಿಜೆಪಿ ಸರ್ಕಾರ ಶಿವಮೊಗ್ಗದಂತಹ ನಗರದಲ್ಲಿ ಒಂದೇ ಒಂದು ಶೌಚಾಲಯ ಕಟ್ಟಲಿಲ್ಲ. ಬಡವರಿಗೆ ಮನೆ ಕಟ್ಟಿಕೊಡಲಿಲ್ಲ, ರೈತರಿಗೆ ಪರಿಹಾರಗಳು ಸಿಗಲಿಲ್ಲ ಬದಲು ಜನ ಜೀವನ ಭಾರವಾಯಿತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್.ನಾಗರಾಜ್, ವಕ್ತಾರೆ ಪಲ್ಲವಿ, ಚಂದ್ರಭೂಪಾಲ್, ರಾಮೇಗೌಡ, ಚಂದನ್, ನಾಗರಾಜ್, ಶಬ್ಬೀರ್ ಅಹಮ್ಮದ್ ಇದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment