ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಮೇ 2020
ಕರೋನದಿಂದ ಗುಣಮುಖರಾದ ಮತ್ತೆ ಮೂವರನ್ನು ಇವತ್ತು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ಮೂಲಕ ಮೂವರನ್ನು ಡಿಸ್ಚಾರ್ಜ್ ಮಾಡಿ, ಬೀಳ್ಕೊಟ್ಟರು.
ಯಾರಿವರು? ಎಲ್ಲಿಯವರು?
ಗುಜರಾತ್ ರಾಜ್ಯದ ಅಹಮದಾಬಾದ್ನಿಂದ ಬಂದಿದ್ದ ಎಂಟು ಮಂದಿಗೆ ಸೋಂಕು ತಗುಲಿತ್ತು. ಈ ಪೈಕಿ ಮೂವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಪೇಷೆಂಟ್ ನಂಬರ್ 811, 812 ಮತ್ತು 814 ಇವತ್ತು ಬಿಡುಗಡೆಯಾಗಿದ್ದಾರೆ. ಇವರ ಪೈಕಿ ಇಬ್ಬರು ಶಿಕಾರಿಪುರ ತಾಲೂಕಿನವರು. ಒಬ್ಬರು ತೀರ್ಥಹಳ್ಳಿ ತಾಲೂಕಿನವರು ಎಂದು ಜಿಲ್ಲಾ ಸರ್ಜನ್ ಡಾ.ರಘುವನಂದನ್ ತಿಳಿಸಿದ್ದಾರೆ.
ಚಪ್ಪಾಳೆ ಮೂಲಕ ಬೀಳ್ಕೊಡುಗೆ
ಮೂವರು ಡಿಸ್ಚಾರ್ಜ್ ಆಗಿ ಐಸೊಲೇಷನ್ ವಾರ್ಡ್ನಿಂದ ಹೊರ ಬರುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಚಪ್ಪಾಳೆ ಹೊಡೆದು ಬೀಳ್ಕೊಟ್ಟರು. ಈಗ ಬಿಡುಗಡೆ ಆಗಿರುವ ಮೂವರು ಇನ್ನು ಹೋಂ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ. ಆರೋಗ್ಯ ಇಲಾಖೆ ವತಿಯಿಂದ ನಿರಂತರವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.
ಕಳೆದ ಸೋಮವಾರ ಇದೇ ತಂಡದ ನಾಲ್ವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅವರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. ಇನ್ನು ಇಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]