ಆನಂದಪುರ: ಸಾಗರ ತಾಲೂಕಿನ ಮಳ್ಳಾಕೊಪ್ಪ ಗ್ರಾಮದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಎಳೆಯುವ ಸಂಬಂಧ ಸರ್ವೇ ಕಾರ್ಯ ನಡೆಸುತ್ತಿದ್ದ ವೇಳೆ ಗುಂಪೊಂದು ಅಡ್ಡಿಪಡಿಸಿ, ಇಂಜಿನಿಯರ್ (Engineer) ಹಾಗೂ ಸರ್ವೇಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇದನ್ನೂ ಓದಿ:➤ ತೀರ್ಥಹಳ್ಳಿ ಪೊಲೀಸರ ಕಾರ್ಯಾಚರಣೆ, ಶಿವಮೊಗ್ಗದ ಟಿಪ್ಪುನಗರ, ಅಣ್ಣಾನಗರದ ಇಬ್ಬರು ಅರೆಸ್ಟ್, ಏನಿದು ಕೇಸ್?
ಇದನ್ನೂ ಓದಿ – ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ಹೈಟೆನ್ಷನ್ ವಿದ್ಯುತ್ ಲೈನ್ ಹಾದುಹೋಗುವ ಹಿನ್ನೆಲೆ, ಇಂಜಿನಿಯರ್ ಪರಶುರಾಮ್ ಮತ್ತು ಸರ್ವೇಯರ್ ಮಲ್ಲನಗೌಡ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಎಳು ಜನರ ಗುಂಪು ಸರ್ವೇಯರ್ ಮಲ್ಲನಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿದ್ದಾರೆ. ಇದನ್ನು ಬಿಡಿಸಲು ಹೋದ ಇಂಜಿನಿಯರ್ ಪರಶುರಾಮ್ ಅವರ ಮೇಲೂ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


