ಶಿವಮೊಗ್ಗದಲ್ಲಿ ಒಂದೆ ಏಟಿಗೆ ತುಂಡಾಗಲಿಲ್ಲ ಬನ್ನಿ, ಧಗಧಗ ಹೊತ್ತಿ ಉರಿಯಲಿಲ್ಲ ರಾವಣ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

119060214 954258745054036 6933822829653446782 o.jpg? nc cat=105& nc sid=110474& nc ohc=jztG790PCawAX8gAOuD& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಅಕ್ಟೋಬರ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕೋವಿಡ್ ಆತಂಕ, ಮಳೆ ಅಡ್ಡಿಯ ನಡೆವೆಯು ಶಿವಮೊಗ್ಗದಲ್ಲಿ ವಿಜಯದಶಮಿ ಮೆರವಣಿಗೆ ವೈಭವದಿಂದ ನಡೆಯಿತು. ತಹಶೀಲ್ದಾರ್ ನಾಗರಾಜ್ ಅವರು ಅಂಬು ಹೊಡೆಯುವ ಮೂಲಕ ನಾಡಹಬ್ಬ ಸಂಪನ್ನಗೊಂಡಿದೆ.

ಶಿವಮೊಗ್ಗದ ಹಳೆ ಜೈಲು ಆವರಣದಲ್ಲಿ ನಿರ್ಮಿಸಲಾಗಿದ್ದ ಬನ್ನಿ ಮಂಟಪದಲ್ಲಿ ತಹಶೀಲ್ದಾರ್ ನಾಗರಾಜ್ ಅವರು ಬನ್ನಿ ಕಡಿಯುವ ಸಂಪ್ರದಾಯ ನೆರವೇರಿಸಿದರು. ಒಂದೆ ಸರಿ ಬನ್ನಿ ಕತ್ತರಿಸಬೇಕು ಅನ್ನುವುದು ಸಂಪ್ರದಾಯ. ಆದರೆ ಈ ಬಾರಿ ಹಾಗಾಗಲಿಲ್ಲ. ಈ ವೇಳೆ ಬಾಳೆ ಕಂದಿನಲ್ಲೆ ಖಡ್ಗ ಸಿಕ್ಕಿಬಿದ್ದು ಕೆಲಕ್ಷಣ ಗೊಂದಲಕ್ಕೀಡಾದರು. ಅರ್ಚಕರ ನೆರವಿನಿಂದ ಬಾಳೆಕಂದು ತುಂಡಾಯಿತು.

VIDEO REPORT 

ರಾವಣ ದಹನ, ಶಿಳ್ಳೆ, ಚಪ್ಪಾಳೆ

ಇತ್ತ ಬನ್ನಿ ಕಡಿಯುತ್ತಿದ್ದಂತೆ ರಾವಣ ದಹನವಾಯಿತು. ಬೃಹತ್ ರಾವಣನ ಮೂರ್ತಿಯನ್ನು ದಹಿಸಲಾಯಿತು. ಪಟಾಕಿಗಳನ್ನು ಸಿಡಿಸಲಾಯಿತು. ಈ ವೇಳೆ ಜನರು ಶಿಳ್ಳೆ, ಚಪ್ಪಾಳೆ, ಘೋಷಣೆ ಕೂಗಿದರು. ಭಾರಿ ಮಳೆಯಿಂದಾಗಿ ರಾವಣನ ಮೂರ್ತಿ ನೆಂದು ಹೋಗಿದ್ದರಿಂದ ರಾವಣ ದಹನ ಪೂರ್ಣಗೊಳ್ಳಲಿಲ್ಲ.

ನಿರೀಕ್ಷೆಗೂ ಮೀರಿ ಜನ

ಕೋವಿಡ್ ಹಿನ್ನೆಲೆಯಲ್ಲಿ ಬನ್ನಿ ಮಂಟಪದ ಬಳಿಗೆ ಹೆಚ್ಚು ಜನರು ಬರುವುದ ಬೇಡ ಎಂದು ಮಹಾನಗರ ಪಾಲಿಕೆ ಮನವಿ ಮಾಡಿತ್ತು. ನೂರಿನ್ನೂರು ಮಂದಿಯಷ್ಟೆ ಸೇರಬೇಕು ಎಂದು ಸೂಚಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಬನ್ನಿ ಮಂಟಪದ ಬಳಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.

122569515 985496425263601 186764312706410466 o.jpg? nc cat=109&ccb=2& nc sid=110474& nc ohc=ULbZk K2k6gAX Vx3dX& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment