ಶಿವಮೊಗ್ಗ ಲೈವ್.ಕಾಂ | SHIKARIPURA NEWS | 11 FEBRUARY 2021
ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ ಹೊಸ ಟ್ರಾಕ್ಟರ್ ಎಂಜಿನ್ ಕಳ್ಳತನ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಶಿಕಾರಿಪುರಕ್ಕೆ ಸೇರಿದವರು.
ಶಿಕಾರಿಪುರದ ಮಂಜುನಾಥ್ (29), ಹರೀಶ್ (21). ನಾಗಭೂಷಣ್ (33) ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇದನ್ನೂ ಓದಿ | SHIRALAKOPPA | ಪಟ್ಟಣ ಪಂಚಾಯಿತಿಗೆ ಸೇರಿದ ಹೊಚ್ಚ ಹೊಸ ಟ್ರಾಕ್ಟರ್ ರಾತ್ರೋರಾತ್ರಿ ನಾಪತ್ತೆ
ಜನವರಿ 30ರಂದು ಶಿರಾಳಕೊಪ್ಪದ ಜಲ ಶುದ್ಧೀಕರಣ ಘಟಕದ ಬಳಿ ನಿಲ್ಲಿಸಿದ್ದ 5.50 ಲಕ್ಷ ರೂ. ಮೌಲ್ಯದ ಟ್ರಾಕ್ಟರ್ ಎಂಜಿನ್ ಕಳ್ಳತನವಾಗಿತ್ತು. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್ಪಿ ಶಿವಾನಂದ ಮದರಕಂಡಿ, ಇನ್ಸ್ ಪೆಕ್ಟರ್ ಗುರುರಾಜ್ ಎನ್.ಮೈಲಾರ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ರಮೇಶ್, ಸಿಬ್ಬಂದಿಗಳಾದ ಕೊಟ್ರೇಶಪ್ಪ, ಆದರ್ಶ, ಮಂಜುನಾಥ ಮತ್ತು ಕಾಂತೇಶ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]