ಲಾಕ್ ಡೌನ್ ವೇಳೆ ಶಿವಮೊಗ್ಗದ ಯುವತಿಯ ವಿಭಿನ್ನ ಆಲೋಚನೆ, IAS, KAS ಓದೋರಿಗೆ ಮೂಡಿಸಿದೆ ಹೊಸ ಭರವಸೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

NAMMUR NEWS NEW PROMO 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MARCH 2021

ಕರೋನ ಲಾಕ್ಡೌನ್ನಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಿಗಳಿಗೆ ದೊಡ್ಡ ಪೆಟ್ಟು ನೀಡಿತು. ಕೋಚಿಂಗ್ ಸೆಂಟರ್ಗಳಿರಲಿಲ್ಲ. ಅಧ್ಯಯನ ಸಾಮಗ್ರಿಗಳು ಸಿಗಲಿಲ್ಲ. ಈ ವೇಳೆ ಶಿವಮೊಗ್ಗದ ಯುವತಿಯೊಬ್ಬಳು ರೂಪಿಸಿದ ಯೋಜನೆ, ಸಾವಿರಾರು ಆಕಾಂಕ್ಷಿಗಳ ಪರೀಕ್ಷಾ ಸಿದ್ಧತೆಯ ಸ್ವರೂಪವನ್ನೇ ಬದಲಿಸಿತು.

ಯುವತಿಯ ಹೊಸ ಪ್ಲಾನ್

ಶಿವಮೊಗ್ಗದ ಐಶ್ವರ್ಯ, ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಉನ್ನತ ಹುದ್ದೆಯಲ್ಲಿದ್ದಾರೆ. ಈ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಕೋಚಿಂಗ್ ಸೆಂಟರ್ಗಳಿಲ್ಲದೆ, ಅಧ್ಯಯನ ಸಾಮಗ್ರಿಗಳು ಸಿಗದೆ ಸಂಕಷ್ಟಕ್ಕೀಡಾದರು. ತಮ್ಮಂತೆ ಲಕ್ಷಾಂತರ ಆಕಾಂಕ್ಷಿಗಳು ಇದೇ ಸಮಸ್ಯೆ ಎದುರಿಸುತ್ತಿದ್ದು, ಎಲ್ಲರಿಗೂ ಅನುಕೂಲ ಆಗುವಂತಹ ಯೋಜನೆ ರೂಪಿಸಬೇಕು ಎಂದು ಯೋಚಿಸಿದರು. ಅದರಂತೆ ಲಾಕ್ ಡೌನ್ ಅವಧಿಯಲ್ಲೇ ವೆಬ್ಸೈಟ್ ಆರಂಭಿಸಿದರು.

ವೆಬ್‍ಸೈಟ್‍ನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್

ವೆಬ್ಸೈಟ್ ಆರಂಭದ ಕುರಿತು ಐಶ್ವರ್ಯ ಅವರು ತಮ್ಮ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಚರ್ಚಿಸಿದರು. ಹಲವರು ಐಶ್ವರ್ಯ ಅವರೊಂದಿಗೆ ಕೈ ಜೋಡಿಸಿದರು. ಐಎಎಸ್ ಭವನ https://iasbhavan.com/ ಎಂಬ ವೆಬ್ಸೈಟ್ ಆರಂಭಿಸಿದರು. ಸುಮಾರು 20 ಮಂದಿ ಸ್ನೇಹಿತರು ಇದಕ್ಕೆ ಕೈ ಜೋಡಿಸಿದರು.

ಪ್ರತಿದಿನ ಮಾಹಿತಿ, ವಿಚಾರಗಳ ವಿಶ್ಲೇಷಣೆ

ಐಎಎಸ್ ಭವನ ವೆಬ್ಸೈಟ್ನಲ್ಲಿ ಪ್ರತಿದಿನ ಒಂದೊಂದು ವಿಚಾರದ ಕುರಿತು ಮಾಹಿತಿ ನೀಡಲು ಆರಂಭಿಸಿದರು. ಮೊದಲಿಗೆ ಸ್ನೇಹಿತರು, ಹಿತೈಷಿಗಳಷ್ಟೇ ಇದಕ್ಕೆ ಓದುಗರಾಗಿದ್ದರು. ಲಾಕ್ಡೌನ್ಅವಧಿ ವಿಸ್ತರಣೆಯಾಗುತ್ತಿದ್ದಂತೆ, ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಈ ವೆಬ್ಸೈಟ್ನತ್ತ ಚಿತ್ತ ಹರಿಸಿದರು. ಐಶ್ವರ್ಯ ಮತ್ತು ಅವರ ಸ್ನೇಹಿತರು ನಿರೀಕ್ಷೆ ಮಾಡದಷ್ಟು ಓದುಗರು ಜೊತೆಯಾದರು. ಪ್ರತಿದಿನ ಒಂದೊಂದು ಸ್ಟಡಿ ಮೆಟಿರಿಯಲ್ ಬಿಡುಗಡೆ ಮಾಡಿದರು. ವಾರಕ್ಕೊಂದು ಟೆಸ್ಟ್ ಕೊಡಲು ಶುರು ಮಾಡಿದರು. ತಾವೂ ಕಲಿತು, ಇತರೆ ಆಕಾಂಕ್ಷಿಗಳ ಕಲಿಕೆಗೂ ಐಶ್ವರ್ಯ ನೆರವಾಗುತ್ತಿದ್ದಾರೆ.

ಕನ್ನಡದಲ್ಲಿ ಮೊದಲ ಪ್ರಯತ್ನ, ಎಲ್ಲವೂ ಉಚಿತ

ವೆಬ್ಸೈಟ್ನ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಐಶ್ವರ್ಯ, ಇಂಗ್ಲೀಷ್ ಭಾಷೆಯಲ್ಲಿ ಇಂತಹ ಹಲವು ವೆಬ್ಸೈಟ್ಗಳಿವೆ. ಅದರೆ ಕನ್ನಡದಲ್ಲಿ ಇದೆ ಮೊದಲ ಪ್ರಯತ್ನ. ಎಲ್ಲರೂ ಓದಬೇಕು ಅನ್ನುವ ಕಾರಣಕ್ಕೆ ವೆಬ್ಸೈಟ್ನಲ್ಲಿ ಎಲ್ಲಾ ಸ್ಟಡಿ ಮೆಟಿರಿಯಲ್, ಉಚಿತವಾಗಿ ಕೊಡುತ್ತಿದ್ದೇವೆ. ಟೆಸ್ಟ್ಗಳು ಕೂಡ ಉಚಿತವಾಗಿರುತ್ತದೆಅನ್ನುತ್ತಾರೆ.

ಐಶ್ವರ್ಯ ಅವರ ವೆಬ್‍ಸೈಟ್‍ ಕುರಿತು ಇಲ್ಲಿದೆ ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 26, 2021

ಊರಗಡೂರಿನ ಸಂಕೇತ್‌ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

ಊರಗಡೂರಿನ ಸಂಕೇತ್‌ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

Leave a Comment