SHIVAMOGGA LIVE NEWS | SHIMOGA | 20 ಜುಲೈ 2022
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (SUICIDE CASE) ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ಉಡುಪಿಯಲ್ಲಿ (UDUPI) ತನಿಖೆ ನಡೆಸುತ್ತಿದ್ದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಈಶ್ವರಪ್ಪ ಅವರ ಮನೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಗುಂಡಪ್ಪ ಶೆಡ್’ನಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ಕುಟುಂಬದವರು ಸಂಭ್ರಮಾಚರಣೆ ಮಾಡಿದರು. ಈಶ್ವರಪ್ಪ ಅವರ ಕುಟುಂಬದವರು ಪರಸ್ಪರ ಸಿಹಿ ತಿನ್ನಿಸಿ ಖುಷಿ ಪಟ್ಟರು. ಈ ವೇಳೆ ಬಿಜೆಪಿಯ ಕೆಲವು ಪ್ರಮುಖರು ಉಪಸ್ಥಿತರಿದ್ದರು.
‘ಮುಕ್ತವಾಗಿ ಬರುತ್ತೇನೆ ಅಂದಿದ್ದೆ’
ಇದೆ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಆಗಿದೆ. ಇದೆ ರೀತಿ ರಿಪೋರ್ಟ್ ಬರಲಿದೆ ಎಂದು ಪ್ರಕರಣ ದಾಖಲಾದ ದಿನವೆ ನಾನು ಹೇಳಿದ್ದೆ. ಈ ಆತ್ಮಹತ್ಯೆಗೂ ನನಗು ಒಂದು ಪರ್ಸೆಂಟ್ ಕೂಡ ಸಂಬಂಧವಿಲ್ಲ. ನನ್ನ ಮನೆ ದೇವರು ಚೌಡೇಶ್ವರಿ ಮೇಲೆ ನಂಬಿಕೆ ಇದೆ ಮುಕ್ತವಾಗಿ ಬರುತ್ತೇನೆ ಎಂದು ಆ ದಿನವೇ ಹೇಳಿದ್ದೆ. ಚೌಡೇಶ್ವರಿ ಆಶೀರ್ವಾದದಿಂದ ಮುಕ್ತವಾಗಿ ಬಂದಿದ್ದೇನೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ದೇಶದ ಮತ್ತು ರಾಜ್ಯದ ಹಿರಿಯರು, ಕಾರ್ಯಕರ್ತರು ಕರೆ ಮಾಡುತ್ತಿದ್ದರು. ಎಲ್ಲರೂ ಧೈರ್ಯ ಕೊಟ್ಟಿದ್ದರು. ಸಾಧು ಸಂತರು ಮನೆಗೆ ಬಂದು ಆಶೀರ್ವಾದ ಮಾಡಿದ್ದರು.
ನನ್ನಿಂದಾಗಿ ನನ್ನ ಪಕ್ಷ, ನಮ ಸರ್ಕಾರ ಮತ್ತು ಪಕ್ಷದ ನಾಯಕರಿಗೆ ಮುಜುಗರಕ್ಕೀಡಾಗಿದ್ದರು. ಈಗ ಅವರೆಲ್ಲ ಮುಜುಗರಿಂದ ಮುಕ್ತವಾಗಿದ್ದಾರೆ ಎಂಬ ಸಂತೋಷವಿದೆ.
ಮತ್ತೆ ಸಚಿವನಾಗುವ ವಿಚಾರ ಭಾರತೀಯ ಜನತಾ ಪಾರ್ಟಿ ಮತ್ತು ನಾಯಕರ ಕೈಯ್ಯಲ್ಲಿದೆ. ನಮ್ಮ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧವಾಗಿರುತ್ತೇನೆ. ಅಕಸ್ಮಾತ್ ಮಂತ್ರಿ ಮಾಡಿದರೆ ಯಾವ ಖಾತೆ ನೀಡಬೇಕು ಅನ್ನುವುದ ಮುಖ್ಯಮಂತ್ರಿ ಅವರಿಗೆ ಬಿಟ್ಟ ತೀರ್ಮಾನ.
ಈಗಷ್ಟೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿದ್ದರು. ಏನೂ ಆಗುವುದಿಲ್ಲ ಧೈರ್ಯವಾಗಿರು ಎಂದು ತಿಳಿಸಿದ್ದಾರೆ. ಆಗ ಪ್ರಕರಣ ದಾಖಲಾದಾಗಲೂ ಯಡಿಯೂರಪ್ಪ ಅವರು ‘ಈಶ್ವರಪ್ಪ ತಪ್ಪ ಮಾಡಿಲ್ಲ. ಮುಕ್ತವಾಗಿ ಬರುತ್ತಾರೆ’ ಎಂದು ಹೇಳಿದ್ದರು. ಈಗಲೂ ಧೈರ್ಯ ಹೇಳಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ – ಗುಡ್ಡೆಕಲ್ಲಿನಲ್ಲಿ ಆಡಿಕೃತ್ತಿಗೆ ಜಾತ್ರೆಗೆ ಅಂತಿಮ ಸಿದ್ಧತೆ, ಹರೋ ಹರ ಸ್ಮರಣೆಗೆ ಕ್ಷಣಗಣನೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200