ಭದ್ರಾವತಿಯಲ್ಲಿ ಸಿಎಂ ಕಾರು ತಪಾಸಣೆ, ಶಿವಮೊಗ್ಗದಲ್ಲಿ ಡಿಕೆಶಿ ಹೆಲಿಕಾಪ್ಟರ್ ಪರಿಶೀಲನೆ, ಮೆರವಣಿಗೆಯಲ್ಲಿ ಏನೇನಾಯ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019

Shivamogga-Live-Number-1-Website

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯಾತಿಗಣ್ಯರೇ ಈ ವೇಳೆ ಉಪಸ್ಥಿತರಿದ್ದರು. ಈ ವೇಳೆ ನಡೆದ ಕೆಲವು ಪ್ರಮುಖ ಸಂಗತಿಗಳು ಗಮನ ಸೆಳೆದವು.

ಭದ್ರಾವತಿಯಲ್ಲಿ ಸಿಎಂ ಕಾರು ಚೆಕ್ಕಿಂಗ್

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗ್ಗೆ ಹಾಸನದಲ್ಲಿ ಪ್ರಚಾರ ನಡೆಸಿ, ಶಿವಮೊಗ್ಗಕ್ಕೆ ಬರುತ್ತಿದ್ದರು. ಭದ್ರಾವತಿ ಕಾರೇಹಳ್ಳಿ ಚೆಕ್’ಪೋಸ್ಟ್’ನಲ್ಲಿ ಸಿಎಂ ಕಾರು ತಡೆದ ಚುನಾವಣಾ ಸಿಬ್ಬಂದಿ, ಅವರ ಕಾರು ತಪಾಸಣೆ ನಡೆಸಿದರು.

ಡಿಕೆಶಿ ಹೆಲಿಕಾಪ್ಟರ್ ಚೆಕ್ ಮಾಡಿದ ಅಧಿಕಾರಿಗಳು

ಸಚಿವ ಡಿ.ಕೆ.ಶಿವಕುಮಾರ್ ಅವರು, ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಅವರು ಬಂದಿಳಿಯುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು, ರಿಯಾಕ್ಷನ್ ಕೇಳಿದರು. ಮಾಧ್ಯಮದವರೊಂದಿಗೆ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದಂತೆ, ಹೆಲಿಪ್ಯಾಡ್’ನಲ್ಲಿ ಚುನಾವಣಾಧಿಕಾರಿಗಳು, ಅವರ ಹೆಲಿಕಾಪ್ಟರನ್ನು ತಪಾಸಣೆಗೆ ಒಳಪಡಿಸಿದರು.

ಮುಖಕ್ಕೆ ಟವಲ್ ಮುಚ್ಚಿಕೊಂಡ ಡಿಕೆಶಿ..!

56400408 818311235196965 1926061445187895296 n.jpg? nc cat=105& nc oc=AQmo 9ShU8yDYBIzUw5wnhizanbs1zi86mJZUlKxzQ6MXe5lnQQvl0pndET7ivSN3IU& nc ht=scontent.fblr1 4

ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಮೆರವಣಿಗೆ ನಡೆಯಿತು. ಗಾಂಧಿ ಬಜಾರ್’ನಿಂದ ಶಿವಪ್ಪನಾಯಕ ಪ್ರತಿಮೆ ಬಳಿ ಬರುತ್ತಿದ್ದಂತೆ, ಅಭಿಮಾನಿಗಳು, ಡಿ.ಕೆ.ಶಿವಕುಮಾರ್, ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ಅವರ ಮೇಲೆ ಹೂವು ಎರಚಲು ಶುರು ಮಾಡಿದರು. ಹೂವು ಬೀಳುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಅವರು ಟವಲ್’ನಿಂದ ತಲೆ ಮುಚ್ಚಿಕೊಂಡರು. ಇದರಿಂದ ಅಭಿಮಾನಿಗಳು ಕೆಲಕಾಲ ಗೊಂದಲಕ್ಕೀಡಾದರು. ಮೈಕ್ ಹಿಡಿದುಕೊಂಡ ಮಧು ಬಂಗಾರಪ್ಪ ಹೂವು ಹಾಕಬೇಡಿ, ಡಿ.ಕೆ.ಶಿವಕುಮಾರ್ ಅವರಿಗೆ ಅಲರ್ಜಿ ಆಗುತ್ತೆ ಅಂದರು.

ಎಲ್ಲರೂ ಮುಂದೆ, ಸಿಎಂ ಎಲ್ಲರ ಹಿಂದೆ..!

56184373 818311328530289 1141102493342629888 n.jpg? nc cat=107& nc oc=AQmzRzlpTSq1mtvsHWW814m9Uu9oFAB 89q tYK g3Ws1QzdSsxbSFz3DzOPn6Ccfgo& nc ht=scontent.fblr1 3

ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅಭ್ಯರ್ಥಿ ಮಧು ಬಂಗಾರಪ್ಪ ಸೇರಿದಂತೆ ಬಹುತೇಕ ಕಾಂಗ್ರೆಸ್, ಜೆಡಿಎಸ್ ಮುಖಂಡರು ಎರಡು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಈ ವಾಹನದಲ್ಲಿ ಸಿಎಂ ಕಾಣಿಸದಿದ್ದರಿಂದ, ಬಹುತೇಕರು ಅವರು ಬಂದೇ ಇಲ್ಲ ಅಂದುಕೊಂಡರು. ಆದರೆ ಹಿಂದೆ ಇದ್ದ ಜೆಡಿಎಸ್ ಪಕ್ಷದ ಸ್ಪೆಷಲ್ ಬಸ್’ನಲ್ಲಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಲ್ಲರತ್ತ ಕೈ ಬೀಸುತ್ತಾ ಬರುತ್ತಿದ್ದರು. ಇದನ್ನು ಕಂಡು ಕಾರ್ಯಕರ್ತರು ಚಕಿತರಾದರು. ಕೊನೆಗೆ ಗೋಪಿ ಸರ್ಕಲ್’ನಲ್ಲಿ, ಎಲ್ಲ ನಾಯಕರು ತೆರೆದ ವಾಹನ ಇಳಿದು, ಸ್ಪೆಷಲ್ ಬಸ್ ಹತ್ತಿ, ಭಾಷಣ ಮಾಡಿದರು.

56276072 818311215196967 1925753002111533056 n.jpg? nc cat=110& nc oc=AQk9UeFIinOHbjmKBUwHQzJI6TEJtKYWCxrr1wipL3Qpcbu8A39u6a8HUnsBAP87EEk& nc ht=scontent.fblr1 4

ಸಿಎಂಗೆ ಮಜ್ಜಿಗೆ ಪ್ಯಾಕೆಟ್ ಎಸೆದ ಕಾರ್ಯಕರ್ತ

ಗೋಪಿ ಸರ್ಕಲ್’ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾಷಣ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಕಾರ್ಯಕರ್ತರೊಬ್ಬರು, ಪಕ್ಕದಲ್ಲೇ ಇದ್ದ ನಂದಿನಿ ಹಾಲು ಪಾರ್ಲರ್’ನಿಂದ ಮಜ್ಜಿಗೆ ಖರೀದಿಸಿ ತಂದು, ಬಸ್ ಮೇಲಿದ್ದ ಸಿಎಂ ಅವರತ್ತ ತೂರಿದರು.

56608861 818183431876412 3660114930004131840 n.jpg? nc cat=111& nc oc=AQltcTLYA8HDSBwFA9TQiYR4qv5VhIznVzm n3 YU8l4UOa2zyeyUPwEoISpsNaHdQs& nc ht=scontent.fblr1 4

ತಲೆ ಸುತ್ತು ಬಂದು ರಸ್ತೆಯಲ್ಲೇ ಬಿದ್ದ ನಾಯಕಿ

ನಾಮಪತ್ರ ಸಲ್ಲಿಕೆ ಮುಗಿದ ಬಳಿಕ ಮುಖ್ಯಮಂತ್ರಿ, ಸಚಿವರು, ಶಾಸಕರು ಮುಖಂಡರು ಹಿಂತಿರುಗಿದರು. ಈ ವೇಳೆ ರಸ್ತೆ ದಾಟುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕಿ ಬಲ್ಕಿಷ್ ಬಾನು, ದಿಢೀರ್ ಕುಸಿದು ಬಿದ್ದರು. ಇದರಿಂದ ಗಾಬರಿಯಾದ ಕಾರ್ಯಕರ್ತರು ರಸ್ತೆ ವಿಭಜಕದ ಮೇಲೆ ಅವರನ್ನು ಕೂರಿಸಿ, ಗಾಳಿ ಬೀಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 3, 2019

ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

Hulikal Ghat Closed for Traffic Following Landslide; Alternate Routes Announced

Hulikal Ghat Closed for Traffic Following Landslide; Alternate Routes Announced

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

Leave a Comment