ಶಿವಮೊಗ್ಗ ಲೈವ್.ಕಾಂ | 10 ಮೇ 2019
ನನಗೆ ಶಿಕಾರಿಪುರ ಮತ್ತು ಸೊರಬ ಎರಡು ಕಣ್ಣುಗಳಿದ್ದಂತೆ. ಶಿಕಾರಿಪುರದಿಂದಲೇ ನನ್ನ ಗೆಲುವಿನ ಶಿಕಾರಿ ಆರಂಭವಾಗಿದೆ. ಹಾಗಾಗಿಯೇ ಫಲಿತಾಂಶಕ್ಕೂ ಮೊದಲೇ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
![]() |
ಶಿಕಾರಿಪುರದ ಗುರುಭವನದಲ್ಲಿ ಜೆಡಿಎಸ್, ಕಾಂಗ್ರೆಸ್ ಆಯೋಜಿಸಿದ್ದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಸುಳ್ಳು ಹೇಳುವವರು ಸೋಲುತ್ತಾರೆ. ಸತ್ಯ ಗೆಲ್ಲುತ್ತದೆ. ಇವರ ಸರ್ವಾಧಿಕಾರಿ ಧೋರಣೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಅವೆಲ್ಲ ನನಗೆ ಮತಗಳಾಗಿವೆ ಬಂದಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾವು ಬಿಜೆಪಿಯವರಂತೆ ಈಡಿಗ, ಲಿಂಗಾಯತ, ಅಲ್ಪಸಂಖ್ಯಾತ, ಹಿಂದುಳಿದವರು ಎಂದು ಲೆಕ್ಕ ಹಾಕಲಿಲ್ಲ. ಎಲ್ಲರೂ ಒಂದೇ ಎಂಬುದು ನಮ್ಮ ನಂಬಿಕೆ. ಹಾಗಾಗಿ ಎಲ್ಲರೂ ನಮ್ಮನ್ನು ಬೆಂಬಲಿಸಿದ್ದಾರೆ. ಶಿಕಾರಿಪುರದ ಕಾರ್ಯಕರ್ತರು, ಜನಪ್ರತಿನಿಧಿಗಳ ದಬ್ಬಾಳಿಕೆಯಿಂದ ನೊಂದಿದ್ದಾರೆ. ಮೇ 23ಕ್ಕೆ ಇವರ ದಬ್ಬಾಳಿಕೆ ಕೊನೆಯಾಗಲಿದೆ ಎಂದರು.
ಪ್ರಮುಖರಾದ ಗೋಣಿ ಮಾಲತೇಶ್, ಹೆಚ್.ಟಿ.ಬಳಿಗಾರ್, ನಗರದ ಮಹದೇವಪ್ಪ, ಶಾಂತ ವೀರಪ್ಪಗೌಡ, ಬಿಳಕಿ ನಾಗರಾಜಗೌಡ, ಹುಲ್ಮಾರ್ ಮಹೇಶ್, ಜೆ.ಫಕೀರಪ್ಪ, ನರಸಿಂಗನಾಯ್ಕ, ಉಳ್ಳಿ ದರ್ಶನ್, ಎನ್.ಅರುಣ್, ಸುರೇಶ್, ಫಯಾಜ್, ಉಮೇಶ್ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200