SHIVAMOGGA LIVE NEWS, 8 FEBRUARY 2025
ಸಾಗರ / ಶಿರಾಳಕೊಪ್ಪ : ATM ಕೇಂದ್ರದಲ್ಲಿ ಸಹಾಯ ಹಸ್ತ ಚಾಚಿ, ವಂಚಿಸುತ್ತಿದ್ದ ಖದೀಮರು ತಮ್ಮ ಕಾರ್ಯಾಚರಣೆಯನ್ನು ಶಿವಮೊಗ್ಗ ಸಿಟಿಗಷ್ಟೆ ಸೀಮಿತಗೊಳಿಸಿಲ್ಲ. ಈಗ ಕಾರ್ಗಲ್ ಮತ್ತು ಶಿರಾಳಕೊಪ್ಪ ಠಾಣೆಗಳಲ್ಲು ಪ್ರಕರಣ ದಾಖಲಾಗಿದೆ.
ಎಟಿಎಂನಿಂದ ಹಣ ಬಿಡಿಸಲು ಬರುವವರಿಗೆ ಅಪರಿಚಿತರು ಸಹಾಯ ಮಾಡುವವರಂತೆ ನಟಿಸುತ್ತಾರೆ. ಅವರ ಎಟಿಎಂ ಕಾರ್ಡ್ ಪಡೆದು, ಪಾಸ್ ವರ್ಡ್ ತಿಳಿದು, ಬಳಿಕ ಎಟಿಎಂ ಕಾರ್ಡ್ ಅದಲು ಬದಲು ಮಾಡಿಕೊಡುತ್ತಾರೆ. ಶಿವಮೊಗ್ಗ ನಗರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿದ್ದವು.
ಕಾರ್ಗಲ್ ಠಾಣೆ ವ್ಯಾಪ್ತಿಯಲ್ಲಿ ಆಗಿದ್ದೇನು?
ನಿವೃತ್ತ ಉದ್ಯೋಗಿ ಬಾಲಯ್ಯ ಅವರು ಕಾರ್ಗಲ್ನ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ತೆರಳಿದ್ದರು. ಹಣ ಬಿಡಿಸಲು ನೆರವು ನೀಡುವುದಾಗಿ ಇಬ್ಬರು ಅಪರಿಚಿತರು ಧಾವಿಸಿದ್ದರು. ಬಾಲಯ್ಯ 10 ಸಾವಿರ ರೂ. ಹಣ ಬಿಡಿಸಿಕೊಂಡು, ಅಪರಿಚಿತರಿಂದ ಎಟಿಎಂ ಕಾರ್ಡ್ ಹಿಂಪಡೆದಿದ್ದರು.
ಆ ಬಳಿಕ ಬಾಲಯ್ಯ ಅವರ ಖಾತೆಯಿಂದ ಎರಡು ಬಾರಿ ಒಟ್ಟು 1.49 ಲಕ್ಷ ರೂ. ಹಣ ಡ್ರಾ ಆಗಿತ್ತು. ಪರಿಶೀಲಿಸಿದಾಗ ಎಟಿಎಂ ಕಾರ್ಡ್ ಬದಲಾಗಿರುವುದು ಬಾಲಯ್ಯ ಗಮನಕ್ಕೆ ಬಂದಿತ್ತು. ಘಟನೆ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಾಳಕೊಪ್ಪ ಠಾಣೆ ವ್ಯಾಪ್ತಿಯಲ್ಲಿ ಆಗಿದ್ದೇನು?
ಗಾರೆ ಕೆಲಸ ಮಾಡುವ ದಸ್ತಗೀರ್ ಎಂಬುವವರು ಶಿರಾಳಕೊಪ್ಪದ ಕೆನರಾ ಬ್ಯಾಂಕ್ ಎಟಿಎಂನಲ್ಲಿ 5 ಸಾವಿರ ರೂ. ಹಣ ಬಿಡಿಸಲು ತೆರಳಿದ್ದರು. ಆಗ ಅವರಿಗೆ ಇಬ್ಬರು ಅಪರಿಚಿತರು ಸಹಾಯ ಮಾಡಿದ್ದರು. ಅದೇ ದಿನ ಸಂಜೆ ದಸ್ತಗೀರ್ ಅವರ ಖಾತೆಯಿಂದ 95 ಸಾವಿರ ರೂ. ಹಣ ವಿತ್ ಡ್ರಾ ಆಗಿರುವುದು ಗೊತ್ತಾಗಿದೆ.
ಪರಿಶೀಲಿಸಿದಾಗ ದಸ್ತಗೀರ್ ಅವರ ಎಟಿಎಂ ಕಾರ್ಡ್ ಬದಲಾಗಿತ್ತು. ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ, ಯಾವ್ಯಾವ ತಾಲೂಕಿಗೆ ಯಾರೆಲ್ಲ ಆಯ್ಕೆಯಾಗಿದ್ದಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200