ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ


ಮೇಷ
ಇವತ್ತು ಜನರೊಂದಿಗೆ ಭೇಟಿಯಾಗುವುದಕ್ಕಿಂತಲೂ ಒಂಟಿಯಾಗಿ ಸಮಯ ಕಳೆಯಲು ಇಷ್ಟ ಪಡುತ್ತೀರ. ಸಂಗಾತಿಯೊಂದಿಗೆ ಸಂತಸದಿಂದ ಸಮಯ ಕಳೆಯುತ್ತೀರಿ.
ವೃಷಭ
ಹೆಚ್ಚು ಆಶಾವಾದಿಯಾಗಿರಲು ಪ್ರಯತ್ನಿಸಿ. ಇದರಿಂದ ನಿಮ್ಮ ವಿಶ್ವಾಸ ಹೆಚ್ಚಲಿದೆ. ನಿಮ್ಮ ಬಳಿ ಹಣ ಕೇಳಿ ಪಡೆಯುವವರಿದ್ದಾರೆ. ಅದರೆ ಅವರು ಮರು ಪಾವತಿ ಮಾಡುವುದು ವಿರಳ.
ಮಿಥುನ
ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆಹ್ಲಾದಕರವಾಗಿರುತ್ತದೆ. ಮಕ್ಕಳು ಒಳ್ಳೆಯ ಸುದ್ದಿ ತರಲಿದ್ದಾರೆ. ಬಿಡುವಿನ ವೇಳೆ ಆಧ್ಯಾತ್ಮಿಕ ಪುಸ್ತಕ ಓದಿ.
ಕರ್ಕಾಟಕ
ಕುಟುಂಬದವರು, ಸ್ನೇಹಿತರಿಗಾಗಿ ಇಂದು ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ಸಂಗಾತಿಯಿಂದ ಶುಭ ಸುದ್ದಿ.
ಸಿಂಹ
ಸೃಜನಶೀಲ ಪ್ರತಿಭೆಯನ್ನು ಬಳಸಿದಲ್ಲಿ ಲಾಭದಾಯಕ. ನಿಮ್ಮ ದೃಢತೆ, ನಿರ್ಭಯತೆಯಿಂದ ಆತ್ಮವಿಶ್ವಾಸ ಹೆಚ್ಚಲಿದೆ.
ಕನ್ಯಾ
ಮನೆಯ ಹಿರಿಯರೊಂದಿಗೆ ಚರ್ಚೆ ಮಾಡಿದರೆ ಹಣಕಾಸು ಸಮಸ್ಯೆಗೆ ಪರಿಹಾರ ಲಭಿಸಲಿದೆ. ವೈವಾಹಿಕ ಜೀವನ ಸುಂದರವಾಗಿರಲಿದೆ.
ತುಲಾ
ಹೂಡಿಕೆ ಮಾಡುವತ್ತ ಆಸಕ್ತಿ ಮೂಡುತ್ತದೆ. ದೀರ್ಘ ಕಾಲದ ಹೂಡಿಕೆಯತ್ತ ಯೋಚಿಸಿದರೆ ಅನುಕೂಲ. ಸ್ನೇಹಿತರ ಜೊತೆಗೆ ಸುತ್ತಾಡಲಿದ್ದೀರಿ.
ವೃಶ್ಚಿಕ
ಪ್ರೀತಿಯ ವಿಚಾರದಲ್ಲಿ ಮಹತ್ವದ ತಿರುವು ಸಿಗಲಿದೆ. ಮದುವೆ ಯೋಗ ಕೂಡಿ ಬರಬಹುದು. ಮಕ್ಕಳೊಂದಿಗೆ ಸಮಯ ಕಳೆಯುವುದು ಉಚಿತ.
ಧನು
ಉಳಿತಾಯದ ಹಣ ಇವತ್ತು ನೆರವಿಗೆ ಬರಲಿದೆ. ಕುಟುಂಬಕ್ಕೆ ಸಂತೋಷದ ಸುದ್ದಿ ತಲುಪಲಿದೆ. ಒತ್ತಡಕ್ಕೆ ಒಳಗಾಗಬಾರದು.
ಮಕರ
ಮನರಂಜನೆಗೆ ಹೆಚ್ಚು ಹಣ ಮತ್ತು ಸಮಯ ಕಳೆಯುವುದನ್ನು ನಿಲ್ಲಿಸಿ. ನಗು ಮುಖವಿದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ.

ಕುಂಭ
ಪ್ರೀತಿ ಪಾತ್ರರು ದ್ವೇಷ ಮಾಡಿದರೂ ನೀವು ಅವರಿಗೆ ಪ್ರೀತಿ ತೋರಿಸಬೇಕು. ಹೆಚ್ಚು ಹಣ ಖರ್ಚಾಗಲಿದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಿರಿ.
ಮೀನ
ಅಪರಿಚಿತ ವ್ಯಕ್ತಿಯೊಂದಿಗೆ ವಿವಾದ. ಇಡೀ ದಿನ ಮನಸು ಕೆಡುವ ಸಾಧ್ಯತೆ. ಮಕ್ಕಳು, ಕುಟುಂಬದವರಿಂದ ಸ್ವಲ್ಪ ನೆಮ್ಮದಿ.
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು

ಮೇಷ
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನು
ಮಕರ
ಕುಂಭ
ಮೀನ



