ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್ ನ್ಯೂಸ್, ಕಾಲುವೆಗಳಿಗೆ ನೀರು ಹರಿಸಲು ಡೇಟ್ ಫಿಕ್ಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 AUGUST 2023

SHIMOGA : ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ನೀರಾವರಿ ನಿಗಮ ತೀರ್ಮಾನಿದೆ. ಜತೆಗೆ ನೀರು ಕಡಿಮೆಯಾಗಿ ಬೆಳೆ ನಷ್ಟವಾದರೆ ಅದಕ್ಕೆ ಇಲಾಖೆ ಹೊಣೆಯಲ್ಲ ಎಂದು ಸಹ ತಿಳಿಸಿದೆ.

ಕಾಲುವೆಗಳಿಗೆ ಯಾವಾಗಿಂದ ನೀರು?

ಆ.10ರಿಂದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಜಲಾಶಯದಲ್ಲಿ ಪ್ರಸ್ತುತ 166 ಅಡಿ (ಗರಿಷ್ಠ 186 ಅಡಿ) ನೀರು ಇದೆ.

ಯಾವ್ಯಾವ ಕಾಲುವೆಗೆ ಎಷ್ಟು ನೀರು?

ಆ.10ರಿಂದ ನೂರು ದಿನಗಳ ಕಾಲ ಎಡದಂಡೆ ಕಾಲುವೆಗೆ 380 ಕ್ಯೂಸೆಕ್ಸ್, ಬಲದಂಡೆ ಕಾಲುವೆಗೆ 2650 ಕ್ಯೂಸೆಕ್ಸ್ ಹರಿಸಲಾಗುವುದು.

PARISHRAMA meet academy

ಒಳಹರಿವಿನ ಆಧಾರದ ಮೇಲೆ ನೀರು

ನೀರಿನ ಲಭ್ಯತೆ, ಒಳಹರಿವಿನ ಆಧಾರದ ಮೇಲೆ ನೀರು ಹರಿಸಲಾಗುತ್ತಿದೆ. ನೀರಿನ ಕೊರತೆಯಿಂದ ಬೆಳೆ ನಷ್ಟವಾದಲ್ಲಿ ಅದಕ್ಕೆ ಇಲಾಖೆ ಹೊಣೆಯಲ್ಲ. ಭದ್ರಾ ಜಲಾಶಯ ವ್ಯಾಪ್ತಿಯ 1.07 ಲಕ್ಷ ಹೆಕ್ಟೇರ್‌ನಲ್ಲಿ ಪ್ರಕಟಿತ ಮುಂಗಾರು ಬೆಳೆ ಬೆಳೆಯಲು ಅವಕಾಶವಿದ್ದು ನಿಗದಿತ ವಿಸ್ತೀರ್ಣದಲ್ಲಿ ಬೆಳೆ ಬೆಳೆದು ರೈತರು ಸಹಕರಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ – ಒಂದೇ ಸೇತುವೆ ಬಳಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ, ಒಬ್ಬನ ಸ್ಥಿತಿ ಗಂಭೀರ

ನಷ್ಟಕ್ಕೆ ರೈತರೆ ಹೊಣೆ

ಬೇರೆ ಬೆಳೆ ಬೆಳೆದು ನಷ್ಟ ಅನುಭವಿಸಿದರೆ ಅದಕ್ಕೆ ರೈತರೆ ನೇರ ಹೊಣೆ ಎಂದು ಆದೇಶಿಸಲಾಗಿದೆ.
72 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 49 ಟಿಎಂಸಿ ಮಾತ್ರ ನೀರಿದೆ. ಮಳೆ ಕೈಕೊಟ್ಟರೆ ರೈತರು ನಷ್ಟ ಅನುಭವಿಸುವುದು ಖಚಿತ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment