ಬೆಳಗೆದ್ದು ಮನೆ ಪಕ್ಕದ ಗೋಡನ್‌ಗೆ ಹೋದವರಿಗೆ ಕಾದಿತ್ತು ಆಘಾತ, ಒಂದೇ ರೀತಿ ಎರಡು ಪ್ರತ್ಯೇಕ ಪ್ರಕರಣ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 MAY 2024

SAGARA : ಶೆಡ್‌ನಲ್ಲಿ ಇರಿಸಿದ್ದ ಅಡಿಕೆ ಕಳ್ಳತನವಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪ್ರಕರಣ 1 : ನಾಡಕಲಸೆ, ಸಾಗರ

ನಾಡಕಲಸೆ ಗ್ರಾಮದ ಪ್ರವೀಣ್‌ ಎಂಬುವವರು ಅಡಿಕೆ ಸಿಪ್ಪೆ ಬಿಡಿಸಿ ಕೊಡುವ ವ್ಯವಹಾರ ನಡೆಸುತ್ತಿದ್ದಾರೆ. ಅಡಿಕೆ ವ್ಯಾಪಾರಿ ಸುಹೇಲ್‌ ಅಹಮದ್‌ ಎಂಬುವವರು ಸಿಪ್ಪೆ ಬಿಡಿಸಿ ಕೊಡುವಂತೆ 150 ಚೀಲ ಅಡಿಕೆ ತಂದಿದ್ದರು. ಪ್ರವೀಣ್‌ ಅವರು ತಮ್ಮ ಮನೆಯ ಗೋಡೋನ್‌ನಲ್ಲಿ ಇರಿಸಿದ್ದರು. ಏ.25ರಂದು ಬೆಳಗ್ಗೆ ಗೋಡನ್‌ಗೆ ಬಂದಾಗ 38 ಕೆ.ಜಿ. ತೂಕದ 18 ಚೀಲ ಸಿಪ್ಪೆಗೋಟು ಕಳ್ಳತನವಾಗಿತ್ತು. ಇದರ ಮೌಲ್ಯ 1.33 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪ್ರಕರಣ 2 : ಮಿಟ್ಲಕೊಪ್ಪ, ಮಾಲ್ವೆ, ಸಾಗರ

ಸಾಗರ ತಾಲೂಕು ಮಿಟ್ಲಕೊಪ್ಪದ ನಾಗರಾಜ ಎಂಬುವವರ ಮನೆಯ ಪಕ್ಕದ ಗೋಡೋನ್‌ನಲ್ಲಿ ಅಡಿಕೆ ಸಂಗ್ರಹಿಸಿದ್ದರು. ಏ.26ರಂದು ಬೆಳಗ್ಗೆ ಗೋಡೊನ್‌ಗೆ ಬಂದು ನೋಡಿದಾಗ ಎರಡು ಚೀಲ ಕೆಂಪು ಅಡಿಕೆ, ಮೂರು ಚೀಲ ಸಿಪ್ಪೆಗೋಟು ಅಡಿಕೆ ಕಳ್ಳತನವಾಗಿದೆ. ಇದರ ಮೌಲ್ಯ 70 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಹಿರಂಗ ಪ್ರಚಾರ ಇವತ್ತೇ ಕೊನೆ, ಯಾವ್ಯಾವ ಅಭ್ಯರ್ಥಿಯ ಪ್ರಚಾರ ಹೇಗಿದೆ? ಇಲ್ಲಿದೆ ಡಿಟೇಲ್ಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment