ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SAGARA, 11 AUGUST 2024 : ಆವಿನಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ನೆರವಾಗಲು ಆತನ ಸ್ನೇಹಿತರು ವಾಟ್ಸಪ್ ಗ್ರೂಪ್ (WhatsApp Group) ಆರಂಭಿಸಿದ್ದಾರೆ. ವಿವಿಧೆಡೆಯ ನೆರವು ಹೆರಿದು ಬರುತ್ತಿದೆ.
ಸಚಿನ್ ಹೆಸರಲ್ಲಿ ವಾಟ್ಸಪ್ ಗ್ರೂಪ್
ಆವಿನಹಳ್ಳಿ ಬಳಿ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕಟ್ಟಿನಕಾರು ಗ್ರಾಮದ ಕೆ.ಪಿ.ಸಚಿನ್ (18) ಮೃತಪಟ್ಟಿದ್ದ. ಸಚಿನ್ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಸಮಾನ ಮನಸ್ಕರು ಧನ ಸಂಗ್ರಹ ಆರಂಭಿಸಿದ್ದಾರೆ. ‘ಸಚಿನ್ ಪಡಬೀಡು ಇವರ ಉಸಿರಿಗೊಂದು ಆಸರೆಯಾಗಿ ನಾವುಗಳುʼ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿ, ಕ್ಯೂ ಆರ್ ಕೋಡ್ ಹಂಚಲಾಗಿದೆ.

ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಹೈಕೋರ್ಟ್ ನ್ಯಾಯಾಧೀಶರಿಗೆ ಪೂರ್ಣ ಕುಂಭ ಸ್ವಾಗತ, ಸಮ್ಮೇಳನದಲ್ಲಿ ಪ್ರಮುಖ ವಿಚಾರ ಚರ್ಚೆ
ಓದಿನಲ್ಲಿ ತುಂಬಾ ಚುರುಕಾಗಿದ್ದ ಹುಡುಗ ಸಚಿನ್ ಮುಂದೊಂದು ದಿನ ದೊಡ್ಡ ಮಟ್ಟಕ್ಕೇರಿ ಕುಟುಂಬಕ್ಕೆ ಆಸರೆಯಾಗಿ ಹಾಗು ಊರಿಗೆ ನೆರವಾಗುತ್ತಿದ್ದ. ಆದರೆ ಈಗ ಬದುಕಿನ ಆರಂಭದಲ್ಲೇ ನಮ್ಮನ್ನೆಲ್ಲ ಅಗಲಿದ್ದಾನೆ. ಸಚಿನ್ ತಂದೆ ತಾಯಿಗೆ ಅವರ ಮಗನ ಸ್ಥಾನವನ್ನು ಯಾರುತುಂಬಲು ಸಾಧ್ಯವಿಲ್ಲ. ಇಂತಹ ಸಂಧರ್ಭದಲ್ಲಿ ಆರ್ಥಿಕವಾಗಿ ನಾವು ಅವರ ಜೊತೆ ನಿಲ್ಲಬೇಕಾಗಿದೆ ಎಂದು ಶಿವಕುಮಾರ್ ಅವರು ವಾಟ್ಸಪ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ
ನೆರವಾಗುವುದು ಹೇಗೆ?
ನೆರವು ನೀಡುವವರು ಮೃತ ಸಚಿನ್ ತಂದೆ ಕೊಲ್ಲಪ್ಪ, ಉಳಿತಾಯ ಖಾತೆ ಸಂಖ್ಯೆ: 1949119004970, ಐಎಫ್ಎಸ್ಸಿ ಕೋಡ್: CNRB0001949 ಕೆನರಾ ಬ್ಯಾಂಕ್ ಕೋಗಾರು ಶಾಖೆ ಅಥವಾ ಮೊ: 8277249772ಗೆ ಫೋನ್ ಪೇ ಮಾಡಬಹುದು ಎಂದು ಯುವಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ನೇಣು ಬಿಗಿದು ವ್ಯಕ್ತಿ ಸಾವು, ಜೇಬಲ್ಲಿತ್ತು ಡೆತ್ ನೋಟ್, ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್
LATEST NEWS
- ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್ಗೆ ಕಾದಿತ್ತು ಶಾಕ್, ಆಗಿದ್ದೇನು?

- ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್ ರಚನೆ, ಯಾರಿಗೆ ಯಾವ ಜವಾಬ್ದಾರಿ?

- ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

- ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

- ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

About The Editor
ನಿತಿನ್ ಆರ್.ಕೈದೊಟ್ಲು















ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಕಾಮೆಂಟ್ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?