ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA, 23 AUGUST 2024
ಮೇಷ : ಈ ದಿನ ವಿದ್ಯಾರ್ಥಿಗಳಿಗೆ ಹಿನ್ನಡೆ. ಹನ್ನೆರಡರ ಚಂದ್ರ ರಾಹು ವ್ಯಯದೊಂದಿಗೆ ಬೇಸರವನ್ನೂ ನೀಡುತ್ತಾರೆ. ಆರೋಗ್ಯದ ಬಗ್ಗೆ ಗಮನ ವಿರಲಿ. ನಾಗನನ್ನು ವಿಶೇಷವಾಗಿ ಆರಾಧಿಸಿ. ಶುಭ ಸಂಖ್ಯೆ: 1-5-8-9
ವೃಷಭ : ಇಂದಿನ ಶುಕ್ರವಾರ ಶುಭವಾಗಿದೆ. ಕೇಂದ್ರದ ರವಿ-ಚಂದ್ರ ಅನುಕೂಲ ನೀಡಿದ್ದು. ಆದರೆ ಅಣ್ಣ ತಮ್ಮಂದಿರು ಮೌನದಿಂದಿರಿ. ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿ. ಶುಭ ಸಂಖ್ಯೆ 2-7-10-11
ಮಿಥುನ : ನಮ್ಮ ಯೋಚನೆಯಂತೆ ಕೆಲಸವಾದರೂ ಹಣದ ಆಗಮನ ಮನಸ್ಸಿನಂತೆ ಇಲ್ಲ. ಭಾಗ್ಯೋದಯದ ಶನಿ ಭಾಗ್ಯಲಕ್ಷ್ಮೀಯನ್ನು ತಡೆದಿದ್ದಾನೆ. ಉತ್ತಮವಿದೆ. ವಿಷ್ಣು ಸಹಸ್ರನಾಮ ಪಠಿಸಿ. ಶುಭ ಸಂಖ್ಯೆ : 5-6-10
ಕರ್ಕ : ಆರಕ್ಕೇರದ ಮೂರಕ್ಕೆ ಇಳಿದ ದಿನ ನಿಮ್ಮದು. ಯಾಕೋ ಬೇಸರ. ಯಾರ ಮಾತನ್ನೂ ಕೇಳಿ ಬೇಸರ ಬೇಡ. ಹಣ ಇಂದು ನೆಮ್ಮದಿ ನೀಡುತ್ತದೆ. ಶ್ರಮವಹಿಸಿ ವಿದ್ಯಾರ್ಥಿಗಳು ಓದಿ. ಆದಿತ್ಯ ಹೃದಯ ಪಠಿಸಿ. ಶುಭ ಸಂಖ್ಯೆ 4-5-1
ಸಿಂಹ : ನೀವು ಎಲ್ಲಿಗೂ ರಾಜ. ಆದರೆ ಹಣ ವಿಚಾರಕ್ಕೆ ಭೋಜ. ಯೋಚಿಸಿ ಖರ್ಚು ಮಾಡಿ. ನಿಮ್ಮ ಗತ್ತು ನಿಮಗೆ ತೊಂದರೆ. ಗಣೇಶನಿಗೆ 21 ಬಾರಿ ನಮಸ್ಕರಿಸಿ. ಶುಭ ಸಂಖ್ಯೆ : 5-6-9-11
ಕನ್ಯಾ : ಕೇತು ಅಶುಭನಾಗಿದ್ದಾನೆ. ಸುಮ್ಮನಿರಿ. ಅನಗತ್ಯ ವಿಚಾರಕ್ಕೆ ಕೈ ಹಾಕಬೇಡಿ. ದಂಪತಿಗಳಲ್ಲಿ ಕಿರಿ-ಕಿರಿ. ನಿಮ್ಮ ಕೆಲಸ ನಿಮಗೆ ಉತ್ತಮ. ಶುಭವೂ ಇದೆ. ಹುರಳಿ ಧಾನ್ಯ ದಾನ ಮಾಡಿ. ಶುಭ ಸಂಖ್ಯೆ : 7-10-11-03

ತುಲಾ : ಎಲ್ಲವನ್ನೂ ಎಲ್ಲರನ್ನು ಸಹಿಸುವ ತಾಳ್ಮೆ ನಿಮ್ಮದು. ಪಂಚಮದ ಶನಿ ಷಷ್ಠದ ರಾಹು. ಸ್ವಲ್ಪ ತೊಂದರೆ. ಆದರೆ ಶುಭವಿದೆ. ಲಾಭದ ದಿನಕರ ಈ ದಿನ ಶುಭಕರ. ಶುಭ ಸಂಖ್ಯೆ : 8-9-4
ವೃಶ್ಚಿಕ : ಮಂಗಳಮಯವಾದ ದಿನ. ಕಾರ್ಯ ಸ್ಥಾನ ಚೆನ್ನಾಗಿದೆ. ವಿವಾಹದ ಯೋಗ ಹತ್ತಿರ ಬಂದಿದೆ. ಲಕ್ಕು ನಿಮ್ಮ ಪುಕ್ಕ ಕೀಳುವುದಿದೆ. ದೇವಿಯ ಕೃಪೆಯಿಂದ ಆನುಕೂಲ. ಶುಭ ಸಂಖ್ಯೆ : 8-1-5
ಧನು : ರಾಹು ಕೇಂದ್ರದಲ್ಲಿ ಇದ್ದಾನೆ. ಪ್ರಯೋಜನವಿಲ್ಲ. ಊಟ ಮುಂದಿದ್ದರೂ ಮಾಡದ ಪರಿಸ್ಥಿತಿ. ಶ್ರದ್ಧೆಯಿಂದ ಆಂಜನೇಯನನ್ನು ಆರಾಧಿಸಿ. ಶುಭಸಂಖ್ಯೆ : 9-12-04
ಮಕರ : ದಂಪತಿಗಳಲ್ಲಿ ಮಾತಿನ ಗಲಾಟೆ. ಮನಸ್ಸಿಗೆ ನೋವು. ಸಹಾಯಕ್ಕೆ ಬಾರದ ಭ್ರಾತೃಗಳು. ಈದಿನ ಬರೀ ಅಶುಭ ಶನಿ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 10-11-02
ಕುಂಭ : ಮಂದಗತಿಯ ಕೆಲಸ. ಆರ್ಥಿಕದ ಅಭಾವ. ಕುಟುಂಬದ ಸಹಕಾರ. ಕಾರ್ಯ ಸಾಧು. ಒಟ್ಟಾರೆ ಮಿಶ್ರ ಫಲ. ಈದಿನ ರಾಯರ ಆರಾಧಿಸಿ. ಶುಭ ಸಂಖ್ಯೆ : 11-03-06
ಮೀನ : ಸುಮ್ಮನೆ ಇದ್ದರೆ ಈದಿನ ಒಳಿತು. ಖರ್ಚು ಕಡಿಮೆ. ವಿದ್ಯೆಯಲ್ಲಿ ಹಿನ್ನಡೆ. ಸರ್ಪದ ಆರಾಧನೆಯಲ್ಲಿ ಭಾಗವಹಿಸಿ . ಬುದ್ದಿವಂತರಾಗುತ್ತೀರ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ‘ರಕ್ತ ಕೊಟ್ಟೇವು, ನೀರು ಕೊಡುವುದಿಲ್ಲ’ ಅಂದವರು ಈಗ ಧ್ವನಿ ಎತ್ತಬೇಕು, ಮಾಜಿ ಮಿನಿಸ್ಟರ್ ಆಗ್ರಹ
LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





