ರೈಲ್ವೆ ಹಳಿ ಬಳಿ ಕತ್ತಲಲ್ಲಿ ಕಂಡರು ಇಬ್ಬರು, ಪ್ರಶ್ನಿಸಿದವರ ಮೇಲೆ ಮನಸೋಯಿಚ್ಛೆ ಹಲ್ಲೆ

SHIMOGA NEWS, 27 SEPTEMBER 2024 : ರೈಲ್ವೆ ಹಳಿ (Track) ಬಳಿ ರಾತ್ರಿ ಕತ್ತಲಲ್ಲಿ ಕುಳಿತಿದ್ದವರನ್ನು ಪ್ರಶ್ನಿಸಿದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.

ಗಾಯಗೊಂಡಿದ್ದ ಆವೇಜ್‌ ಅಲಿ ಮತ್ತು ಅಭಿಷೇಕ್‌ ಎಂಬುವವರು ಗಾಯಗೊಂಡಿದ್ದಾರೆ. ಶೇಷಾದ್ರಿಪುರಂ ಫ್ಲೈ ಓವರ್‌ ಕಳೆಗೆ ಆವೇಜ್‌ ಅಲಿ ಮತ್ತು ಅಭಿಷೇಕ್‌ ಮದ್ಯ ಸೇವಿಸಿ, ರೈಲ್ವೆ ಹಳಿ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದರು. ಕತ್ತಲಲ್ಲಿ ಇಬ್ಬರು ಎನೋ ಮಾಡುತ್ತಿರುವುದನ್ನು ಗಮನಿಸಿ ಪ್ರಶ್ನಿಸಿದ್ದಾರೆ. ಆಗ ಆ ಇಬ್ಬರು ಯುವಕರು ಆವೇಜ್‌ ಅಲಿ ಮತ್ತು ಅಭಿಷೇಕ್‌ ಮೇಲೆ ಹಲ್ಲೆ ನಡೆಸಿದ್ದರೆ ಎಂದು ಆರೋಪಿಸಲಾಗಿದೆ. ಕೋಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ » ಕೆಲಸ ಮುಗಿಸಿ ಗೋಪಿ ಸರ್ಕಲ್‌ಗೆ ಮರಳಿದ ವ್ಯಕ್ತಿಗೆ ಕಾದಿತ್ತು ಆಘಾತ

crime name image

Leave a Comment