ಜನಶತಾಬ್ದಿ ರೈಲು ಹತ್ತುವ ಆತುರ, ಜಾರಿ ಬಿದ್ದು ತಿರುಚಿತು ವ್ಯಕ್ತಿಯ ಕಾಲು

SHIMOGA NEWS, 8 OCTOBER 2024 : ರೈಲು (Train) ಹತ್ತುವ ಆತುರದಲ್ಲಿ ವ್ಯಕ್ತಿಯೊಬ್ಬರು ಪ್ಲಾಟ್‌ಫಾರಂನಲ್ಲಿ ಜಾರಿ ಬಿದ್ದು ಕಾಲು ತಿರುಚಿದೆ. ರೈಲ್ವೆ ಪೊಲೀಸರು ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಶಿಕಾರಿಪುರದ ಫಯಾಜ್‌ ಖಾನ್‌ ಎಂಬುವವರು ಜನಶತಾಬ್ದಿ ರೈಲು ಹತ್ತಲು ಬಂದಾಗ ಘಟನೆ ಸಂಭವಿಸಿದೆ. ಫಯಾಜ್‌ ಖಾನ್‌ ಅವರು ನಿಲ್ದಾಣಕ್ಕೆ ಬಂದಾಗ ರೈಲು ಪ್ಲಾಟ್‌ಫಾರಂ 2ರಿಂದ ಹೊರಟಿತ್ತು. ಆತರುವಾಗಿ ಪ್ಲಾಟ್‌ಫಾರಂ ಹೊರಡಲು ಯತ್ನಿಸಿದಾಗ ಫಯಾಜ್‌ ಖಾನ್‌ ಅವರು ಜಾರಿ ಬಿದ್ದು ಕಾಲು ತಿರುಚಿತ್ತು.

Shimoga railway station incident

ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಶಫಿಉಲ್ಲಾ ಅವರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಫಯಾಜ್‌ ಖಾನ್‌ ಅವರನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ » ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment