ಶಿವಮೊಗ್ಗ ತಾಲೂಕಿನ ಎರಡು ಕಡೆ ಪೊಲೀಸರ ದಾಳಿ, ಮೂವರು ಅರೆಸ್ಟ್

SHIMOGA NEWS, 25 OCTOBER 2024 : ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಎರಡು ಕಡೆ ಪೊಲೀಸರು ದಾಳಿ (Raid) ನಡೆಸಿದ್ದಾರೆ. ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ 1 : ಕುವೆಂಪು ನಗರ

ಶಿವಮೊಗ್ಗ ಪಟ್ಟಣದ ಕುವೆಂಪು ನಗರ ಬಡಾವಣೆಯಲ್ಲಿ ಇಬ್ಬರು ಯುವಕರು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಬಸವನಗುಡಿಯ ಭರತ್‌.ಟಿ ಅಲಿಯಾಸ್‌ ಜಾನ್‌ ಭರತ್‌ (27) ಮತ್ತು ನರಸಿಂಹ ಅಲಿಯಾಸ್‌ ದಾಸ (39) ಬಂಧಿತರು. ಇವರಿಂದ 28 ಸಾವಿರ ರೂ. ಮೌಲ್ಯದ 668 ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನ ಬಂಧಿಸಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

One-arrest-by-Shimoga-rural-police-at-Kuvempu-Nagara in a raid

ಇದನ್ನೂ ಓದಿ » ಆನಂದಪುರ ಬಳಿ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

ಪ್ರಕರಣ 2 : ಕುಂಸಿ ಬಳಿಯ ನಾಗರಬಾವಿ

ನಾಗರಬಾವಿ ಪೊಲೀಸ್‌ ಠಾಣೆ ಬಳಿ ವ್ಯಕ್ತಿಯೊಬ್ಬರ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಬೀರನಕೆರೆ ಗ್ರಾಮದ ಚಂದ್ರಾನಾಯಕ್‌ (46) ಬಂಧಿತ. ಈತನಿಂದ 15 ಸಾವಿರ ರೂ. ಮೌಲ್ಯದ 640 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kumsi Limits

One-arrest-by-Shimoga-rural-police-at-Kuvempu-Nagara.

Leave a Comment