ಗುತ್ತಿಗೆದಾರರು, ಕೃಷಿಕರಾಗಿದ್ದ ಟಿ.ಸುಬ್ಬರಾಮಯ್ಯ 2003ರಲ್ಲಿ ಸುಬ್ಬಯ್ಯ ಟ್ರಸ್ಟ್ ಆರಂಭಿಸಿ, ಆಸ್ಪತ್ರೆಗಳನ್ನು ಶುರು ಮಾಡಿದ್ದರು. ಬಳಿಕ ಸುಬ್ಬಯ್ಯ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಮ್ಯಾಕ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಿದ್ದರು. ಸುಬ್ಬರಾಮಯ್ಯ ಅವರ ಪುತ್ರ ಡಾ. ನಾಗೇಂದ್ರ ಅವರು ಸುಬ್ಬಯ್ಯ ಆಸ್ಪತ್ರೆಗಳ ಸಮೂಹದ ಎಂ.ಡಿ. ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹಲವು ಗಣ್ಯರಿಂದ ಸಂತಾಪ
ಟಿ.ಸುಬ್ಬರಾಮಯ್ಯ ಅವರ ನಿಧನಕ್ಕೆ ಶಿವಮೊಗ್ಗದ ಪ್ರಮುಖರು, ರಾಜಕಾರಣಿಗಳು, ವೈದ್ಯರು ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ನಗರದ ಉದ್ಯಮ ವಲಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯಿಂದ ಶಿವಮೊಗ್ಗ ನಗರದಲ್ಲಿ ಒಬ್ಬ ಅತ್ಯುತ್ತಮ ಉದ್ಯಮಿಯನ್ನು ಕಳೆದುಕೊಂಡು ಉದ್ಯಮ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ.
ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

![]()
2003ರಲ್ಲಿ ತಡೀಕಲ್ ಸುಬ್ಬಯ್ಯ ಟ್ರಸ್ಟ್ ಆರಂಭಿಸಿ, ಅನೇಕ ವೈದ್ಯರಿಗೆ ಮಾರ್ಗದರ್ಶಕರಾಗಿದ್ದಾರೆ. ಸುಬ್ಬರಾಮಯ್ಯ ಅವರ ನಿಧನದಿಂದ ವೈದ್ಯಕೀಯ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ.
ಬಿ.ವೈ.ರಾಘವೇಂದ್ರ, ಸಂಸದ
![]()
ಇದನ್ನೂ ಓದಿ » ಕುಂಸಿ, ಆಯನೂರು ಸುತ್ತಮುತ್ತ ನಾಳೆ ಇಡೀ ದಿನ ಕರೆಂಟ್ ಇರಲ್ಲ