ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸಾಗರ : ತೆಂಗಿನ ಮರದ (Tree) ಮೇಲೆ ಗೂಡು ಕಟ್ಟಿದ್ದ ಗಿಣಿಯನ್ನು ಹಿಡಿಯುವ ಸಾಹಸದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತೆಂಗಿನ ಮರ ತಲೆ ಮೇಲೆ ಬಿದ್ದು ಸಚಿನ್ (24) ಕೊನೆಯುಸಿರೆಳೆದಿದ್ದಾನೆ.
ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಯುವಕರು ಪಾರಾಗಿದ್ದಾರೆ.
ಒಣಗಿದ ತೆಂಗಿನ ಮರದ ತುದಿಯಲ್ಲಿ

ಭೂತಯ್ಯನ ಕಟ್ಟೆ ಸಮೀಪ ಒಣಗಿದ ತೆಂಗಿನ ಮರದ (Tree) ತುದಿಯಲ್ಲಿ ಗಿಣಿಯೊಂದು ಗೂಡು ಕಟ್ಟಿತ್ತು. ಮರ ಉರುಳಿಸಿ ಗೂಡು ಮತ್ತು ಗಿಣಿಯನ್ನು ಸೆರೆ ಹಿಡಿಯಲು ಯುವಕರು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಮರ ಕತ್ತರಿಸುವಾಗ ಒಣಗಿದ ಮರ ಯುವಕರತ್ತ ಉರುಳಿದೆ. ಸಚಿನ್ ಎಂಬಾತನ ತಲೆ ಮೇಲೆ ಮರ ಬಿದ್ದಿದ್ದು, ಆತನ ಸಾವನ್ನಪ್ಪಿದೆ.
ಸಚಿನ್ ಜೊತೆಗೆ ತೆರಳಿದ್ದ ಇನ್ನಿಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಲಕ್ಷ ಲಕ್ಷ ಮೌಲ್ಯದ ಮಾಂಗಲ್ಯ ಸರ ಖರೀದಿಸಿ ಮನೆಗೆ ಹೋಗಿ ನೋಡಿದಾಗ ಕಾದಿತ್ತು ಆಘಾತ, ಆಗಿದ್ದೇನು?
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು















