ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ನಂಬಿಸಿ ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಲಾಗಿದೆ. (Gold Coins)
₹11 ಲಕ್ಷ ವಂಚನೆಯಾಗಿದೆ ಎಂದು ಆರೋಪಿಸಿ ಗುತ್ತಿಗೆದಾರ ಗೌತಮ್ ಭಂಡಾರಿ ಎಂಬುವವರು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ವಂಚನೆ?
ಗೌತಮ್ ಭಂಡಾರಿ ಎಂಬುವವರಿಗೆ ಬೆಂಗಳೂರಿನಲ್ಲಿ ಶಿವಮೊಗ್ಗದ ಪ್ರದೀಪ ಎಂಬಾತನ ಪರಿಚಯವಾಗಿತ್ತು. ಪ್ರದೀಪ ಆಗಾಗ ಅವರಿಗೆ ಕರೆ ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಟೂರಿಸ್ಟ್ ಜಾಗಗಳನ್ನು ತೋರಿಸುವುದಾಗಿ ಹೇಳುತ್ತಿದ್ದ. ಗೌತಮ್ ಭಂಡಾರಿ ಅವರು ತಮ್ಮ ಸ್ನೇಹಿತರಾದ ನಾಗೇಶ್, ಚಿಕ್ಕಸ್ವಾಮಿ ಜೊತೆಗೆ ಈಚೆಗೆ ಸಿಗಂದೂರು ದೇವಸ್ಥಾನಕ್ಕೆ ಆಗಮಿಸಿದ್ದರು.
ಶಿವಮೊಗ್ಗದಲ್ಲಿ ಪ್ರದೀಪ್ಗೆ ಕರೆ ಮಾಡಿದ್ದರು. ದೇವಸ್ಥಾನದಿಂದ ಹಿಂತಿರುಗುವಾಗ ಶಿವಮೊಗ್ಗ ಸಮೀಪ ಶ್ರೀರಾಂಪುರಕ್ಕೆ ಬರುವಂತೆ ಆತ ತಿಳಿಸಿದ್ದ.
ನಿರ್ಜನ ಪ್ರದೇಶದಲ್ಲಿ ಚಿನ್ನ ನಾಣ್ಯ ಕೊಟ್ಟ
ಶ್ರೀರಾಂಪುರದಲ್ಲಿ ಪ್ರದೀಪ, ವಸಂತ, ಕೊಳ್ಳಿರಘು, ಮುದ್ದಪ್ಪ ಎಂಬುವವರನ್ನು ಕರೆತಂದಿದ್ದ. ಇವರ ಬಳಿ ಚಿನ್ನದ ಪೂರ್ವಜರ ಚಿನ್ನದ ನಾಣ್ಯಗಳಿವೆ. ಮುದ್ದಪ್ಪನ ಮಗಳ ಮದುವೆಗೆ ಹಣ ಹೊಂದಿಸಲು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರದೀಪ ನಂಬಿಸಿದ್ದ. ಬೆಂಗಳೂರಿನಿಂದ ಬಂದಿದ್ದವರ ಕೈಗೆ ಎರಡು ಚಿನ್ನ ನಾಣ್ಯಗಳನ್ನು ಕೊಟ್ಟಿದ್ದ ಎಂದು ಆರೋಪಿಸಲಾಗಿದೆ.

₹11 ಲಕ್ಷಕ್ಕೆ ಚಿನ್ನದ ನಾಣ್ಯಗಳು
ನಾಣ್ಯಗಳನ್ನು ಬೆಂಗಳೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಅಸಲಿ ಚಿನ್ನ ಎಂದು ಗೊತ್ತಾಗಿತ್ತು. ಹಾಗಾಗಿ ಗೌತಮ್ ಭಂಡಾರಿ, ಪ್ರದೀಪ್ಗೆ ಕರೆ ಮಾಡಿ ಉಳಿದ ಚಿನ್ನದ ನಾಣ್ಯ ಖರೀದಿಸುವುದಾಗಿ ತಿಳಿಸಿದ್ದರು. 250 ಗ್ರಾಂ ಬಂಗಾರದ ನಾಣ್ಯಗಳಿಗೆ ₹11 ಲಕ್ಷ ಕೊಡಬೇಕು ಎಂದು ಪ್ರದೀಪ ತಿಳಿಸಿದ್ದ ಎಂದು ಆರೋಪಿಸಲಾಗಿದೆ.
ಗುತ್ತಿಗೆದಾರ ಗೌತಮ್ ಭಂಡಾರಿ ಮತ್ತು ಸ್ನೇಹಿತರೆಲ್ಲ ಸೇರಿ ₹11 ಲಕ್ಷ ಹಣದೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಶ್ರೀರಾಂಪುರದ ನಿರ್ಜನ ಪ್ರದೇಶಕ್ಕೆ ತೆರಳಿ, ಪ್ರದೀಪ ಮತ್ತು ಆತನ ಸಹಚರರಿಂದ ಹಣ ಚಿನ್ನದ ನಾಣ್ಯಗಳನ್ನು ಖರೀದಿಸಿದ್ದರು. ಅವುಗಳನ್ನು ಬೆಂಗಳೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಅವು ಚಿನ್ನವಲ್ಲ ಎಂಬುದು ಗೊತ್ತಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸಬ್ ಇನ್ಸ್ಪೆಕ್ಟರ್ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?
LATEST NEWS
- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

- ಗಾಂಧಿ ಬಜಾರ್ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್, ಏನಿದು ಕೇಸ್?

- ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

- ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್

- ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

About The Editor
ನಿತಿನ್ ಆರ್.ಕೈದೊಟ್ಲು
















