ತೂದೂರಿನ ಬಟ್ಟೆ ಅಂಗಡಿಗೆ ಕೆಂಪು ಕಾರಿನಲ್ಲಿ ಬಂದ ಗ್ರಾಹಕ, ಆತ ಹೋದ ಮೇಲೆ ಮಾಲೀಕನಿಗೆ ಕಾದಿತ್ತು ಆಘಾತ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ತೀರ್ಥಹಳ್ಳಿ: ತುರ್ತಾಗಿ ನಗದು ಬೇಕಿದ್ದು ಗೂಗಲ್‌ ಪೇ (Google Pay) ಮಾಡುವುದಾಗಿ ಅಂಗಡಿ ಮಾಲೀಕನಿಗೆ ನಂಬಿಸಿ ವಂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕು ತೂದುರಿನ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದನ್ನೂ ಓದಿ » ಶಿವಮೊಗ್ಗದ ವ್ಯಕ್ತಿಗೆ ಬೆಂಗಳೂರಿನ ಫೈನಾನ್ಸ್‌ ಸಂಸ್ಥೆಯಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್‌

ಜೂನ್‌ 27ರಂದು ಮಧ್ಯಾಹ್ನ ಕೆಂಪು ಕಾರಿನಲ್ಲಿ ಬಂದ ಗ್ರಾಹಕನೊಬ್ಬ ಬಟ್ಟೆ ಅಂಗಡಿಯಲ್ಲಿ ₹1100 ಬೆಲೆಯ ಒಳ ಉಡುಪು ಖರೀದಿಸಿದ್ದ. ತನಗೆ ₹20 ಸಾವಿರ ನಗದು ಅವಶ್ಯಕತೆ ಇದೆ. ಒಳ ಉಡುಪಿನ ದರ ಒಂದು ಸಾವಿರ ರುಪಾಯಿ ಮುರಿದುಕೊಂಡು ₹19 ಸಾವಿರ ನಗದು ಕೊಡಿ. ತಾನು ₹20 ಸಾವಿರ ಗೂಗಲ್‌ ಪೇ ಮಾಡುವುದಾಗಿ ತಿಳಿಸಿದ್ದ.

Tooduru-name-board-at-Thirthahalli

ಆತ ಹೇಳಿದಂತೆ ಅಂಗಡಿ ಮಾಲೀಕ (ಹೆಸರು ಗೌಪ್ಯ) ₹19 ಸಾವಿರ ನಗದನ್ನು ಆ ವ್ಯಕ್ತಿಗೆ ನೀಡಿದ್ದರು. ಆತ ₹20 ಸಾವಿರ ಗೂಗಲ್‌ ಪೇ ಮಾಡಿರುವುದಾಗಿ ತಿಳಿಸಿ ಅಂಗಡಿಯಿಂದ ಹೋಗಿದ್ದ. ಬಳಿಕ ಅಂಗಡಿ ಮಾಲೀಕ ತನ್ನ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಹಣ ಬಂದಿರಲಿಲ್ಲ. ಆತನಿಗಾಗಿ ಹುಡುಕಾಡಿದ ಅಂಗಡಿ ಮಾಲೀಕ ತಡವಾಗಿ ದೂರು ನೀಡಿದ್ದಾರೆ. ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment